ಯಾವುದು ಚೆನ್ನಾಗಿ ಕಾಣುತ್ತದೆಯೋ ಅಥವಾ ಆಲಿಸುವುದಕ್ಕೆ ಚೆನ್ನಾಗಿದೆಯೋ ಅದು ಯಾವಾಗಲೂ ದೇವರ ಯೋಜನೆಯಾಗಿರುವುದಿಲ್ಲ..!
ಆದ್ದರಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನೀವು ದೇವರೊಂದಿಗೆ ಸಮಾಲೋಚಿಸಬೇಕು ಏಕೆಂದರೆ ಮೇಲ್ನೋಟಕ್ಕೆ ಉತ್ತಮವಾಗಿ ಕಾಣುವ ಆದರೆ ನಿಮಗಾಗಿ ಇರುವ ದೇವರ ಅತ್ಯುತ್ತಮ ಯೋಜನೆ ಮತ್ತು ಶಾಂತಿಯನ್ನು ಕದಿಯಲು ಸೈತಾನನಿಂದ ರೂಪಿಸಲ್ಪಟ್ಟ ಸಂದರ್ಭಗಳಿಂದ ಅವರು ನಿಮ್ಮನ್ನು ದೂರವಿಡಬಲ್ಲರು..
ಪೂರ್ಣಹೃದಯದಿಂದ ಕರ್ತನಲ್ಲಿ ಭರವಸವಿಡು;
ನಿನ್ನ ಸ್ವಂತ ಬುದ್ಧಿಯ ಮೇಲೆ ಆಧಾರ ಮಾಡಿಕೊಳ್ಳಬೇಡ.
ನಿನ್ನ ಎಲ್ಲಾ ಮಾರ್ಗಗಳಲ್ಲಿ ಆತನನ್ನು ಸನ್ಮಾನಿಸು.
ಆಗ ಆತನು ನಿನ್ನ ಮಾರ್ಗಗಳನ್ನು ಸರಾಗಮಾಡುವನು.
ನಿಮಗೆ ಎಲ್ಲವೂ ತಿಳಿದಿದೆ ಎಂದು ಭಾವಿಸಬೇಡಿ.
ದೇವರ ಬಳಿಗೆ ಓಡಿ!
ಸರಿಯಾದ ನಿರ್ಧಾರವನ್ನು ಮಾಡಲು ದೇವರನ್ನು ಕೇಳಲು 3 ಮಾರ್ಗಗಳಿವೆ:
– ಒಂದು ನಿರ್ಧಾರವನ್ನು ತೆಗೆದುಕೊಳ್ಳುವಾಗ ದೇವರನ್ನು ಪ್ರಾರ್ಥಿಸಿ ಮತ್ತು ಅವರನ್ನು ಅರಸಿ
– ಒಂದು ನಿರ್ಧಾರವನ್ನು ತೆಗೆದುಕೊಳ್ಳುವಾಗ ದೇವರ ವಾಕ್ಯವನ್ನು ಓದಿ
– ಒಂದು ನಿರ್ಧಾರವನ್ನು ತೆಗೆದುಕೊಳ್ಳುವಾಗ ದೈವೀಕವಾದ ಸಲಹೆಯನ್ನು ಪಡೆಯಿರಿ
ಕರ್ತನು ಹೇಳುತ್ತಾನೆ ”ನಾನು — ನಿನಗೆ ಬುದ್ದಿ ಹೇಳುವೆನು; ನೀನು ಹೋಗತಕ್ಕ ಮಾರ್ಗವನ್ನು ನಿನಗೆ ಬೋಧಿಸುವೆನು; ನನ್ನ ಕಣ್ಣಿನಿಂದ ನಿನ್ನನ್ನು ನಡಿಸುವೆನು..”
”ಹೇಗಂದರೆ–ಅದನ್ನು ಮಾಡುವ ಕರ್ತನೂ ಅದನ್ನು ಸ್ಥಾಪಿಸುವದಕ್ಕಾಗಿ ಅದನ್ನು ರೂಪಿಸಿದ ಕರ್ತನೂ ಕರ್ತನೆಂಬ ಹೆಸರುಳ್ಳಾತನೂ ಹೇಳುವದೇನಂದರೆ- ”ನನ್ನನ್ನು ಕರೆ, ಆಗ ನಿನಗೆ ಉತ್ತರ ಕೊಡುವೆನು; ನಿನಗೆ ತಿಳಿಯದ ದೊಡ್ಡ ಮಹತ್ತಾದವುಗಳನ್ನು ನಿನಗೆ ತಿಳಿಸುವೆನು”….” ( ಯೆರೆಮೀಯ 33:2-3)
June 2
What shall we say, then? Shall we go on sinning so that grace may increase? By no means! We died to sin; how can we live in it any longer?