ಯೇಸು ಸಮಾಧಿಯಿಂದ ಎದ್ದರು ಎಂಬ ಅಂಶವು ಆತನ ಅದ್ಭುತ ಮತ್ತು ಪ್ರಬಲ ಶಕ್ತಿಯನ್ನು ಪ್ರಕಟಪಡಿಸುತ್ತದೆ. ಇದು ಕ್ರಿಸ್ತನು ಎಲ್ಲದರ ಮೇಲೆ ವಿಜಯಶಾಲಿಯಾಗಿದ್ದಾನೆಂದು ತೋರಿಸುತ್ತದೆ..
ಕರ್ತನು ಜೀವಿಸುತ್ತಿರುವುದರಿಂದ, ನಾವು ನಾಳೆಯನ್ನು ಎದುರಿಸಬಹುದಾಗಿದೆ..!
ಯೇಸುಕ್ರಿಸ್ತನ ಪುನರುತ್ಥಾನದ ಮೂಲಕ ಕ್ರೈಸ್ತರಿಗೆ ಕೊಡಲಾದ ನಿರೀಕ್ಷೆಯ ವಾಗ್ದಾನವನ್ನು ಎಂದಿಗೂ ಮರೆಯಬೇಡಿ..
ಇದು ವಿಶ್ವಾಸಿಗಳಾದ ನಮಗೆ, ದೇವರು ನಮ್ಮೊಂದಿಗಿದ್ದಾರೆ ಮತ್ತು ಆತನು ನಮಗಾಗಿ ಇದ್ದಾರೆ ಎಂಬ ವಾಗ್ದಾನಗಳನ್ನು ನೀಡುತ್ತದೆ..
ಈ ಜೀವನದಲ್ಲಿ ನಾವು ಎದುರಿಸುವ ಯಾವುದೂ ಆತನ ಶಕ್ತಿಗಿಂತ ದೊಡ್ಡದಲ್ಲ ಎಂಬ ಜ್ಞಾಪನೆಗಳಿಂದ ಆತನ ವಾಕ್ಯವು ತುಂಬಿದೆ..
ನಾವು ಹಿಡಿದಿಟ್ಟುಕೊಳ್ಳಬೇಕಾದ ದೃಢಭರವಸೆಯನ್ನು ಆತನು ನಮಗೆ ನೀಡುತ್ತಾನೆ, ಆದ್ದರಿಂದ ನಾವು ಬಲಹೀನರೆಂದು ಭಾವಿಸಿದಾಗ, ಆತನು ನಿಜವಾಗಿಯೂ ಬಲಶಾಲಿಯಾಗಿದ್ದಾನೆ ಎಂದು ನಾವು ಅರಿತಿರುತ್ತೇವೆ..
ಆತನು ನಮ್ಮ ಬಲಹೀನತೆಗಳಲ್ಲಿ ನಮಗೆ ಸಹಾಯ ಮಾಡುತ್ತಾನೆ, ಆತನು ಮಾಡುತ್ತಿರುವ ಎಲ್ಲವನ್ನೂ ನಾವು ಸಂಪೂರ್ಣವಾಗಿ ನೋಡಲು ಸಾಧ್ಯವಾಗದಿದ್ದರೂ ಸಹ ಆತನು ನಮ್ಮ ಜೀವನದಲ್ಲಿ ಅದ್ಭುತಗಳನ್ನು ಮಾಡುತ್ತಾನೆ. ಮತ್ತು ನಾವು ಎಂದಿಗಿಂತಲೂ ಹೆಚ್ಚು ಭರವಸೆಯಿಂದಿರಬಹುದು, ಆತನು ಇಂದಿಗೂ ನಮ್ಮ ಪರವಾಗಿ ಹೋರಾಡುತ್ತಲೇ ಇದ್ದಾರೆ..
ಆತನು ಜೀವಿಸುವ ಕಾರಣ ಭವಿಷ್ಯದ ಬಗ್ಗೆ ಎಂದಿಗೂ ಭಯ ಅಥವಾ ಅನುಮಾನ ಇರಬಾರದು..
‘’ಯೇಸು ಹೀಗೆಂದರು, ‘’ನಾನು ಜೀವಿಸುವುದರಿಂದ ನೀವು ಸಹ ಜೀವಿಸುವಿರಿ’’……’’ (ಯೋವಾನ್ನ 14:19)
September 18
Do nothing out of selfish ambition or vain conceit, but in humility consider others better than yourselves. Each of you should look not only to your own interests but also