ಪ್ರತಿದಿನವೂ, ನಾವು ದೇವರ ಆಶೀರ್ವಾದವನ್ನು ಸ್ವೀಕರಿಸಿಕೊಳ್ಳುತ್ತೇವೆ. ನಾನು ಉಸಿರಾಡುವ ಗಾಳಿ, ನನಗೆ ಬೇಕಾದ ನೀರು, ನನ್ನ ಮನೆಯಲ್ಲಿನ ಆಹಾರದಂತಹ ಸರಳ ವಸ್ತುವಿನಿಂದ ಹಿಡಿದು ನನ್ನ ತಲೆಯ ಮೇಲಿನ ಸೂರಿನವರೆಗೆ ಎಲ್ಲೆಡೆ ದೇವರ ಒದಗಿಸುವಿಕೆಗಳ ಚಿಹ್ನೆಗಳಾಗಿವೆ.
ನೀವು ಅದನ್ನು ಹುಡುಕಲು ಸಿದ್ಧರಿದ್ದರೆ ಕ್ರೈಸ್ತರ ಜೀವನವು ದೇವರ ಆಶೀರ್ವಾದದಿಂದ ತುಂಬಿರುತ್ತದೆ.
ಅನೇಕವೇಳೆ, ಅತ್ಯಲ್ಪವೆಂದು ತೋರುವ ಯಾವುದನ್ನಾದರೂ ಮಾಡಲು ಸಿದ್ಧರಿರುವ ನಮ್ಮ ಇಚ್ಛೆಯ ಪರಿಣಾಮವಾಗಿ ದೇವರ ಮಹತ್ತರವಾದ ಆಶೀರ್ವಾದಗಳು ಬರುತ್ತವೆ. ಆದ್ದರಿಂದ ನಿಮ್ಮನ್ನು ನೀವೇ ಕೇಳಿಕೊಳ್ಳಿ, “ನಾನು ಇನ್ನೂ ಸಾಧಿಸಲು ಪ್ರಯತ್ನಿಸದೆ ಇರುವಂತಹ ಮುಖ್ಯವೆಲ್ಲವೆಂದು ತೋರುತ್ತಿರುವುದನ್ನು ಮಾಡಲು ದೇವರು ನನಗೆ ಸವಾಲು ಹಾಕಿದ್ದಾನೆರೇ? ಎಂದು.
ನಮ್ಮ ವಿಧೇಯತೆಯ ಪರಿಣಾಮವಾಗಿ ದೇವರು ಸಾಮಾನ್ಯವಾಗಿ ಇತರರಿಗೆ-ನಿರ್ದಿಷ್ಟವಾಗಿ, ನಮಗೆ ಹತ್ತಿರವಿರುವವರಿಗೆ-ಪ್ರತಿಫಲ ನೀಡುತ್ತಾರೆ. ಉದಾಹರಣೆಗೆ, ಒಬ್ಬ ತಂದೆತಾಯಿ ಕರ್ತನಿಗೆ ವಿಧೇಯರಾದಾಗ, ಇಡೀ ಕುಟುಂಬವು ದೇವರ ಆಶೀರ್ವಾದದ ಪ್ರತಿಫಲವನ್ನು ಪಡೆದುಕೊಳ್ಳುತ್ತದೆ. ಅಂತೆಯೇ, ಮಗುವಿನ ವಿಧೇಯತೆಯು ಅವನ ಅಥವಾ ಅವಳ ಹೆತ್ತವರನ್ನು ಆಶೀರ್ವದಿಸುತ್ತದೆ…
ದೇವರಿಗೆ ವಿಧೇಯರಾಗುವುದು ಯಾವಾಗಲೂ ವಿವೇಕವುಳ್ಳ ಕ್ರಿಯೆಯಾಗಿದೆ ಎಂಬುದನ್ನು ನಾವು ಗುರುತಿಸಬೇಕು. ಅವರು ನಮ್ಮ ಖಾಲಿತನವನ್ನು ತೆಗೆದುಕೊಳ್ಳಬಹುದು – ಹಣಕಾಸು, ಸಂಬಂಧಗಳು ಅಥವಾ ವೃತ್ತಿಜೀವನಕ್ಕೆ ಸಂಬಂಧಿಸಿರಬಹುದು-ಮತ್ತು ಅದನ್ನು ಅದ್ಭುತವಾಗಿ ಬದಲಾಯಿಸಬಹುದು.
ಆತನು ನಿಮಗೆ ಏನನ್ನಾದರೂ ಮಾಡಲು ಹೇಳಿದಾಗ ಮತ್ತು ಅದು ಅವರ ಚಿತ್ತವೆಂದು ನೀವು ನಿಸ್ಸಂದೇಹವಾಗಿ ತಿಳಿದಿದ್ದಾಗ, ನುಡಿಯುತ್ತಿರುವ ಕಾರ್ಯವನ್ನು ಯಾರು ಮಾಡುತ್ತಿದ್ದಾರೆ ಎಂಬುದರ ಆಧಾರದ ಮೇಲೆ ಮಾತ್ರ ನೀವು ವಿಧೇಯರಾಗಬೇಕೇ ಹೊರತು ನೀವು ಏನು ಮಾಡಬೇಕೆಂದು ಕೇಳಿಕೊಂಡಿದ್ದೀರಿ ಎಂಬುದರ ಮೇಲೆ ಅಲ್ಲ.
ವಿಧೇಯತೆಯು ಯಾವಾಗಲೂ ಆಶೀರ್ವಾದಕ್ಕೆ ಕಾರಣವಾಗುತ್ತದೆ.
ಕರ್ತನಿಗೆ ವಿಧೇಯರಾಗುವ ಗುರಿಯನ್ನು ಹೊಂದಿಸಿಕೊಳ್ಳಿ ಮತ್ತು ನಿಮ್ಮ ಜೀವನದಲ್ಲಿ ಆತನು ಕಾರ್ಯ ಸಾಧಿಸುವುದನ್ನು ನೋಡಿ.
ಕ್ರಿಸ್ತ ಯೇಸುವಿನ ಮಹಿಮೆಯಲ್ಲಿ ಜೀವಿಸುವುದು ನೆಲದಲ್ಲಿ ಗಟ್ಟಿಯಾಗಿ ನೆಟ್ಟಿರುವ ಮರದಂತೆ – ನೀವು ಅದಕ್ಕೆ ನಿರಂತರವಾಗಿ ನೀರು ಹಾಕಿದರೆ ಅದು ಫಲ ನೀಡುತ್ತದೆ.
‘’ನನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ತಕ್ಕ ಹಾಗೆ ನಿಮ್ಮ ಪ್ರತಿಯೊಂದು ಕೊರತೆಯನ್ನು ನೀಗಿಸುವನು……’’ (ಫಿಲಿಪ್ಪಿ 4:19)
June 2
Christ was sacrificed once to take away the sins of many people, and he will appear a second time, not to bear sin, but to bring salvation to those who