ಆಲೋಚಿಸಲು ಮತ್ತು ಉನ್ನತ ಕನಸು ಕಾಣಲು ಹಾಗೂ ದೇವರ ಜ್ಞಾನದಲ್ಲಿ ವೃದ್ಧಿಯಾಗಲು ನಿಮಗೆ ನೀವೇ ಅವಕಾಶವನ್ನು ನೀಡಿ.
ಯೇಸುವೇ ದೇವರ ಜ್ಞಾನವಾಗಿದ್ದಾರೆ. ಜ್ಞಾನವು ನಿಮಗೆ ಬೇಕಾಗಿದ್ದರೆ, ನೀವು ಆತನೊಂದಿಗೆ ಪ್ರಾರಂಭಿಸಲೇಬೇಕು. ಇತರ ಎಲ್ಲಾ ಜ್ಞಾನವು ಅದರಿಂದ ಹರಿಯುವಂಥದ್ದಾಗಿದೆ. ನೀವು ಮಾಡಬಹುದಾದ ಬುದ್ಧಿವಂತ ನಿರ್ಧಾರವೆಂದರೆ ದೇವರ ಜ್ಞಾನವಾಗಿರುವ ಯೇಸು ಕ್ರಿಸ್ತನೊಂದಿಗೆ ಸಂಬಂಧವನ್ನು ಪ್ರಾರಂಭಿಸುವುದು.
ಆದರೆ ಕಹಿಯಾದ ಹಗೆತನ ಮತ್ತು ಜಗಳ ನಿಮ್ಮ ಹೃದಯಗಳೊಳಗೆ ಇರುವಲ್ಲಿ ನೀವು ಸತ್ಯಕ್ಕೆ ವಿರೋಧವಾಗಿ ಸುಳ್ಳಾಡಿ ಹೊಗಳಿಕೊಳ್ಳಬೇಡಿರಿ. ಅದು ಮೇಲಣಿಂದ ಬಂದ ಜ್ಞಾನವಲ್ಲ; ಅದು ಭೂಸಂಬಂಧವಾದದ್ದು, ಪ್ರಾಕೃತಭಾವವಾದದ್ದು, ದೆವ್ವಗಳಿಗೆ ಸಂಬಂಧಪಟ್ಟದ್ದು.
ಇಹಲೋಕಜ್ಞಾನವು ದೇವರ ಮುಂದೆ ಹುಚ್ಚುತನವಾಗಿದೆ. ಯಾಕಂದರೆ–ಆತನು ಜ್ಞಾನಿ ಗಳನ್ನು ಅವರ ಸ್ವಂತತಂತ್ರದಲ್ಲಿಯೇ ಹಿಡುಕೊಳ್ಳುತ್ತಾನೆಂತಲೂ ಬರೆದದೆಯಲ್ಲಾ
ನೀವು ಯೇಸುವನ್ನು ಕರೆದಾಗ, ನಿಮ್ಮ ಪರಿಸ್ಥಿತಿಗೆ ಆತನು ತನ್ನ ಜ್ಞಾನವನ್ನು ನೀಡುತ್ತಾನೆ.
ಬುದ್ಧಿವಂತರಾಗಿರುವುದು ಮತ್ತು ತಿಳುವಳಿಕೆಯನ್ನು ಹೊಂದಿರುವುದು ಉತ್ತಮ, ಆದರೆ ಅದನ್ನು ಸೂಕ್ತವಾಗಿ ಅನ್ವಯಿಸುವ ಜ್ಞಾನವನ್ನು ಹೊಂದಿರುವುದು ಹೆಚ್ಚು ಮೌಲ್ಯಯುತವಾಗಿದೆ. ಈ ಜೀವನದಲ್ಲಿ ನೀವು ಏನನ್ನಾದರೂ ಬಯಸುತ್ತಿದ್ದರೆ, ನೀವು ಜ್ಞಾನವನ್ನು ಬಯಸಬೇಕು ಎಂದು ನಾನು ಪ್ರಾರ್ಥಿಸುತ್ತೇನೆ..
ಪವಿತ್ರಾತ್ಮರು ನಿಮಗೆ ಮಾರ್ಗದರ್ಶನ ನೀಡುತ್ತಾರೆ ಮತ್ತು ಎಲ್ಲಾ ವಿಷಯಗಳಲ್ಲಿ ನಿಮ್ಮನ್ನು ಮುನ್ನಡೆಸುತ್ತಾರೆ. ಅವರ ಎಚ್ಚರಿಕೆಗಳನ್ನು ಗಮನಿಸಿ ಮತ್ತು ಆತನ ಶಾಂತಿಗಾಗಿ ನೋಡಿ..
ಯಾವಾಗಲೂ ಹೆಚ್ಚು ಜ್ಞಾನ ಇರುತ್ತದೆ, ಕಲಿಯಲು ಹೆಚ್ಚಾಗಿರುತ್ತದೆ. ಹೊಸ ವಿಷಯಗಳನ್ನು ಕಲಿಯಲು ಮುಕ್ತವಾಗಿರಿ ಮತ್ತು ನೀವು ಜ್ಞಾನವಂತರಾಗುತ್ತೀರಿ.
ನಿಮಗೆ ಜ್ಞಾನ ಬೇಕಾದರೆ, ಕೇಳಿ. ಇದು ತುಂಬಾ ಸರಳವಾಗಿದೆ. ನಿಮ್ಮನ್ನು ದೀನತೆಗೊಳಿಸಿಕೊಳ್ಳಿ, ಜ್ಞಾನವನ್ನು ಕೇಳಿ, ಕಲಿತುಕೊಳ್ಳುವ ಆತ್ಮವನ್ನು ಹೊಂದಿರಿ, ಮತ್ತು ದೇವರು ಅದನ್ನು ನಿಮಗೆ ಕೊಡುತ್ತಾರೆ. ಅವರೇ ಜ್ಞಾನದ ಪರಮ ಮೂಲವಾಗಿದ್ದಾರೆ.
’’ಜ್ಞಾನವನ್ನು ಕರ್ತನೇ ಕೊಡುತ್ತಾನೆ; ಆತನ ಬಾಯಿಂದಲೇ ತಿಳುವಳಿಕೆಯೂ ವಿವೇಕವೂ ಹೊರಟು ಬರುತ್ತವೆ…….’’ (ಜ್ಞಾನೋಕ್ತಿ 2:6)
June 2
Christ was sacrificed once to take away the sins of many people, and he will appear a second time, not to bear sin, but to bring salvation to those who