ಅವಕಾಶಕ್ಕೆ ಮುನ್ನವೇ ತಯಾರಿ ಆಗಬೇಕು..!
ದಾವೀದನು ಎಂದಿಗೂ ಕಿನ್ನರಿ ನುಡಿಸುವುದನ್ನು ಕರಗತ ಮಾಡಿಕೊಳ್ಳದಿದ್ದರೆ, ಸೌಲನಿಗಾಗಿ ನುಡಿಸಲು ಅವನು ಆಯ್ಕೆಯಾಗುತ್ತಿರಲಿಲ್ಲ ಮತ್ತು ಸೌಲನು ಆತನನ್ನು ಗಮನಿಸುತ್ತಿರಲಿಲ್ಲ.
ದಾವೀದನು ಎಂದಿಗೂ ಸಿಂಹ ಮತ್ತು ಕರಡಿಯನ್ನು ಕೊಲ್ಲದೇ ಇದ್ದಿದ್ದರೆ, ಗೋಲಿಯಾತ್ನನ್ನು ಎದುರಿಸಲು ಸೌಲನು, ದಾವೀದನನ್ನು ಬಿಡುತ್ತಿರಲಿಲ್ಲ ಮತ್ತು ಇಸ್ರಾಯೇಲರು ದಾವೀದನನ್ನು ರಾಜನನ್ನಾಗಿ ಸ್ವೀಕರಿಸುತ್ತಿರಲಿಲ್ಲ.
ದಾವೀದನು ತಯಾರಿ ಮಾಡದಿದ್ದರೆ, ಅವನು ಅವಕಾಶವನ್ನು ವ್ಯಯಮಾಡುತ್ತಿದ್ದನು (ಹಾಳುಮಾಡುತ್ತಿದ್ದನು).
ತನ್ನ ಕೆಲಸದಲ್ಲಿ ಶ್ರದ್ಧೆಯುಳ್ಳವನನ್ನು ನೀನು ನೋಡಿದ್ದೀಯಾ? ಅವನು ನೀಚರ ಮುಂದೆ ಅಲ್ಲ, ಅರಸರ ಮುಂದೆಯೇ ನಿಲ್ಲುವನು.
’’ಮೊಂಡುಕೊಡಲಿಯ ಬಾಯನ್ನು ಮೊನೆಮಾಡದ್ದಿದ್ದರೆ ಹೆಚ್ಚು ಬಲಪ್ರಯೋಗ ಮಾಡಬೇಕಾಗುವುದು. ಕಾರ್ಯಸಿದ್ಧಿಗೆ ಜ್ಞಾನವೇ ಸಾಧನ……’’ (ಉಪದೇಶಕನ ಗ್ರಂಥ 10:10)
June 2
What shall we say, then? Shall we go on sinning so that grace may increase? By no means! We died to sin; how can we live in it any longer?