ನಿಮ್ಮ ಮತ್ತು ನಿಮ್ಮ ಪರಿಸ್ಥಿತಿಯ ಬಗ್ಗೆ ನಕಾರಾತ್ಮಕ ನುಡಿಗಳನ್ನು ನುಡಿಯುವುದು ನಿಮಗೆ ಅರಿವಿಲ್ಲದೇ(ಉದ್ಧೇಶರಹಿತವಾಗಿ) ನೀವು ತಲುಪಬೇಕಾದ ನಿರ್ದಿಷ್ಟ ಸ್ಥಾನ/ಗುರಿ ರದ್ದುಗೊಳಿಸಬಹುದು..!
ನಿಮ್ಮ ಬಳಿ ಇಲ್ಲದಿರುವ ಬಗ್ಗೆ ಅಥವಾ ನಿಮ್ಮಲ್ಲಿರುವ ನಕಾರಾತ್ಮಕತೆಯ ಬಗ್ಗೆ ಮಾತನಾಡಲು ನೀವು ಪ್ರಚೋದಿಸಲ್ಪಟ್ಟಾಗಲು, ಅದಕ್ಕೆ ಮಣಿದು ಅದರ ಬಗ್ಗೆ ಬಾಯಿ ತೆರೆಯಬೇಡಿ.
ದೇವರು ನಿಮ್ಮನ್ನು ತನ್ನ ವಾರಸುದಾರರು ಎಂದು ಕರೆದಿರುವಾಗ ಸೈತಾನನು ನಿಮ್ಮ ಜೀವನದ ಮೇಲೆ ಭದ್ರವಾದ ಹಿಡಿತವನ್ನು ಹಿಡಿದುಕೊಳ್ಳಲು ಬಿಡಬೇಡಿ..!!
ಎರಡು ರೀತಿಯ ಸ್ವರಗಳು ಇಂದು ನಿಮ್ಮ ಗಮನವನ್ನು ಸೆಳೆಯುತ್ತವೆ. ನಕಾರಾತ್ಮಕವಾದವುಗಳು ನಿಮ್ಮ ಮನಸ್ಸನ್ನು ಅನುಮಾನ, ಕಹಿ ಮತ್ತು ಭಯದಿಂದ ತುಂಬುತ್ತವೆ. ಧನಾತ್ಮಕವಾದವುಗಳು ನಿರೀಕ್ಷೆ ಮತ್ತು ಬಲವನ್ನು ತರುತ್ತವೆ. ನೀವು ಗಮನಹರಿಸಲು ಮತ್ತು ಮಾತನಾಡಲು ಯಾವುದನ್ನು ಆಯ್ಕೆ ಮಾಡುವಿರಿ?
ಯಾಕಂದರೆ ಹೃದಯದ ಸಮೃದ್ಧಿಯಿಂದ ಅವನ ಬಾಯಿ ಮಾತನಾಡುತ್ತದೆ.
ಜೀವವನ್ನೇ ನುಡಿಯಿರಿ(ಮಾತನಾಡಿ)..!
’’ನಾಲಿಗೆಯ ವಶದಲ್ಲಿ ಮರಣವೂ ಜೀವವೂ ಇವೆ; ಅದನ್ನು ಪ್ರೀತಿಸುವವರು ಅದರ ಫಲವನ್ನು ತಿನ್ನುವರು….’’ (ಜ್ಞಾನೋಕ್ತಿ 18:21)
June 2
Christ was sacrificed once to take away the sins of many people, and he will appear a second time, not to bear sin, but to bring salvation to those who