ನೀವು ವಾಗ್ವಾದ ಮಾಡಲು ಬಯಸುವುದಾದರೆ ದೇವರು ನಿಮ್ಮ ಜೀವನಕ್ಕಾಗಿ ಇರುವ ಅವರ ಕನಸನ್ನು ಹೇಳುವುದಿಲ್ಲ; ನೀವು ಚರ್ಚಿಸಲು ಬಯಸುವುದಾದರೆ ದೇವರು ನಿಮ್ಮ ಜೀವನಕ್ಕಾಗಿ ಇರುವ ಅವರ ದರ್ಶನವನ್ನು(Vision) ಹೇಳುವುದಿಲ್ಲ; “ನಾನು ಅದರ ಬಗ್ಗೆ ಯೋಚಿಸೋಣ” ಎಂದು ನೀವು ಹೇಳುವುದಾದರೆ ನಿಮ್ಮನ್ನು ಈ ಭೂಮಿಯ ಮೇಲೆ ಯಾತಕ್ಕಾಗಿ ಇರಿಸಿದ್ದಾರೆ ಎಂದು ದೇವರು ಹೇಳುವುದಿಲ್ಲ.
ಇದು ನಿಮಗೆ ಅತ್ಯಂತ ಸಂಪೂರ್ಣ ಅವಶ್ಯಕತೆಯಾಗಿರಬೇಕು..!!
ದೇವರು ಪ್ರಕಟ ಪಡಿಸುವ ಚಿತ್ತವು ದೇವರನ್ನು ಗೌರವಿಸುವ ಜೀವನಶೈಲಿಯಾಗಿದ್ದು, ತನ್ನ ಜನರಿಂದ ದೇವರು ಬಯಸುವುದನ್ನು ಬೈಬಲ್ ನಲ್ಲಿ (ಪವಿತ್ರ ಗ್ರಂಥದ ವಾಕ್ಯಗಳಲ್ಲಿ) ಪ್ರಕಟಗೊಳಿಸಲಾಗಿದೆ ಇದು ದೇವರನ್ನು ಪ್ರೀತಿಸುವುದು ಮತ್ತು ಇತರರನ್ನು ಪ್ರೀತಿಸುವುದಾಗಿದೆ.
ಸಾಂತ್ವನ ನೀಡುವವರಾದ, ಸಲಹೆಗಾರನಾದ, ಸಹಾಯಕನಾದ, ಮಧ್ಯಸ್ತಿಕನಾದ, ವಕೀಲನಾದ, ಬಲಪಡಿಸುವವರಾದ, ಜೊತೆ ನಿಲ್ಲುವವರಾದ, ಪವಿತ್ರಾತ್ಮರು , ತಂದೆಯು ನನ್ನ ಹೆಸರಿನಲ್ಲಿ, ನನ್ನ ಸ್ಥಾನದಲ್ಲಿ, ನನ್ನನ್ನು ಪ್ರತಿನಿಧಿಸಲು ಮತ್ತು ನನ್ನ ಪರವಾಗಿ ಕಾರ್ಯನಿರ್ವಹಿಸಲು ಕಳುಹಿಸಿಕೊಡುವ ಈ ಆದರಿಕನೇ ಎಲ್ಲವುಗಳನ್ನು ನಿಮಗೆ ಬೋಧಿಸಿ ನಾನು ನಿಮಗೆ ಹೇಳಿದವುಗಳನ್ನೆಲ್ಲಾ ನಿಮ್ಮ ನೆನಪಿಗೆ ತರುವನು.
ಯೇಸುವನ್ನು ನಮ್ಮ ಪ್ರಭುವಾಗಿ, ದೇವರಾಗಿ ಮತ್ತು ರಕ್ಷಕರಾಗಿ ಸ್ವೀಕರಿಸಿಕೊಂಡಾಗ ಪವಿತ್ರಾತ್ಮರು ಈಗಾಗಲೇ ನಮ್ಮಲ್ಲಿಯೇ ಇದ್ದಾರೆ ಎಂದು ಈಗ ನಮಗೆ ತಿಳಿದಿದೆ.
ಸತ್ಯದಲ್ಲಿ ಹೊಳೆಯುವ ಬೆಳಕು ನನ್ನ ಆಯ್ಕೆ ಮತ್ತು ನಿರ್ಧಾರಗಳಲ್ಲಿ ನನಗೆ ಮಾರ್ಗದರ್ಶನ ನೀಡುತ್ತದೆ;
ನಿಮ್ಮ ವಾಕ್ಯದ ಪ್ರಕಟಣೆಯು ನನ್ನ ಮಾರ್ಗವನ್ನು ಸ್ಪಷ್ಟಪಡಿಸುತ್ತದೆ
”ನೀನು ದೇವರಿಗೆ ಯೋಗ್ಯನಾಗಿ ಕಾಣಿಸಿಕೊಳ್ಳುವದಕ್ಕೆ ಅಭ್ಯಾಸಿಸು. ಅವಮಾನಕ್ಕೆ ಗುರಿಯಾಗದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾಗಿ ವಿಭಾಗಿಸುವವನೂ ಆಗಿರು…..”(2 ತಿಮೊಥಿ 2:15)
September 18
Do nothing out of selfish ambition or vain conceit, but in humility consider others better than yourselves. Each of you should look not only to your own interests but also