ನಮ್ಮ ಆಯ್ಕೆಗಳು ಸಮಾನ ತೂಕವನ್ನು ಹೊಂದಿರುವುದಿಲ್ಲ ಆದರೂ , ನಾವು ಮಾಡುವ ಪ್ರತಿಯೊಂದು ಆಯ್ಕೆಯೂ ನಮ್ಮ ಜೀವನ ಸಾಗುವ ದಿಕ್ಕಿನೆಡೆಗೆ ಕೊಡುಗೆ ನೀಡುತ್ತದೆ, ಒಂದೋ ದೇವರೊಂದಿಗಿನ ಶಾಶ್ವತ ಜೀವನಕ್ಕೆ ಅಥವಾ ಸೈತಾನನೊಂದಿಗೆ ಶಾಶ್ವತ ಜೀವನಕ್ಕೆ.
ಶುಭ ಸಂದೇಶ ಏನೆಂದರೆ ನಂಬುವ ಯಾರೊಂದಿಗಾದರೂ ದೇವರ ಪವಿತ್ರಾತ್ಮರು ಇರುತ್ತಾರೆ, ದೇವರನ್ನು ಗೌರವಿಸುವ ರೀತಿಯಲ್ಲಿ ಜೀವಿಸಲು ಸರಿಯಾದ ಆಯ್ಕೆಗಳನ್ನು ಮಾಡಲು ಅಧಿಕಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಜ್ಞಾನವನ್ನು ಕರ್ತನೇ ಕೊಡುತ್ತಾನೆ; ಆತನ ಬಾಯಿಂದಲೇ ತಿಳುವಳಿಕೆಯೂ ವಿವೇಕವೂ ಹೊರಟು ಬರುತ್ತವೆ.
ನೀವು ಅವಿಶ್ವಾಸಿಗಳೊಂದಿಗೆ ಸೇರಿ ಸಮವಲ್ಲದ ನೊಗವನ್ನು ಹೊರಬೇಡಿರಿ; ಯಾಕಂದರೆ ಅನೀತಿಯ ಕೂಡ ನೀತಿಗೆ ಅನ್ಯೋನ್ಯತೆ ಏನು? ಕತ್ತಲೆಯ ಕೂಡ ಬೆಳಕಿಗೆ ಐಕ್ಯವೇನು?
ಒಬ್ಬ ವ್ಯಕ್ತಿಯು ಜ್ಞಾನವಿಲ್ಲದೆ/ತಿಳುವಳಿಕೆ ಇಲ್ಲದೆ ಇರುವುದು ಒಳ್ಳೆಯದಲ್ಲ, ಮತ್ತು ತನ್ನ ಪಾದಗಳಿಂದ ದುಡುಕುವವನು ಪಾಪಮಾಡುತ್ತಾನೆ, ಹಠಾತ್ ಪ್ರವೃತ್ತಿಯಿಂದ ವರ್ತಿಸುತ್ತಾನೆ. ಎಚ್ಚರಿಕೆಯಿಲ್ಲದೆ ಅಥವಾ ಪರಿಣಾಮಗಳನ್ನು, ಪಾಪಗಳನ್ನು ವಿಶ್ಲೇಷಿಸದೇ ಮುಂದುವರಿಯುತ್ತಾನೆ; ಹೆಜ್ಜೆ ತಪ್ಪುತ್ತಾನೆ.
ಶಿಕ್ಷಣವನ್ನು ಕೈಕೊಳ್ಳುವವನು
ಜೀವನದ ಮಾರ್ಗದಲ್ಲಿ ಇದ್ದಾನೆ;
ಗದರಿಕೆಯನ್ನು ತಿರಸ್ಕರಿಸುವವನು
ತಪ್ಪುಮಾಡುತ್ತಾನೆ.
ನಿಮ್ಮಲ್ಲಿ ಯಾವನಿಗಾದರೂ ಜ್ಞಾನ ಕಡಿಮೆಯಾಗಿದ್ದರೆ ಅವನು ದೇವರನ್ನು ಕೇಳಿಕೊಳ್ಳಲಿ, ಅದು ಅವನಿಗೆ ದೊರಕುವದು; ದೇವರು ಹಂಗಿಸದೆ ಎಲ್ಲರಿಗೂ ಉದಾರ ಮನಸ್ಸಿನಿಂದ ಕೊಡುವಾತನಾಗಿದ್ದಾನೆ. (ಯಾಕೋಬ 1:5)
May 3
Do not be quick with your mouth, do not be hasty in your heart to utter anything before God. God is in heaven and you are on earth, so let