ನಾವು ನಮ್ಮ ಆಯ್ಕೆಗಳನ್ನು ವಿಶ್ವಾಸಾರ್ಹವಲ್ಲದ ಅಧಿಕಾರಿಗಳ ಮೇಲೆ, ಹಾಗು ಸಂಸ್ಕೃತಿ, ಸಂಪ್ರದಾಯ, ಕಾರಣಗಳು, ಭಾವನೆಗಳು ಮತ್ತು ಈ ಲೋಕ ನಮಗೆ ಏನು ಹೇಳುತ್ತದೆ ಎಂಬುದರ ಮೇಲೆ ಆಧರಿಸಿರುವುದರಿಂದ ನಮಗೆ ಅನೇಕ ತೊಂದರೆಗಳು ಸಂಭವಿಸುತ್ತವೆ.
ಅತ್ಯುನ್ನತ ನಡತೆಯ ಆಯ್ಕೆಗಳು ನಿಮ್ಮ ಬದ್ಧತೆಗಳಿಗೆ ಸತ್ಯ ಮತ್ತು ನಂಬಿಗಸ್ತಿಕೆಯನ್ನು ಆಧರಿಸಿವೆ – ಸರಿಯಾದ ಆಯ್ಕೆಗಳನ್ನು ಮಾಡಲು, ಒಳ್ಳೆಯ ಆಯ್ಕೆಗಳನ್ನು ಮಾಡಲು, ದೇವರು ಗೌರವಿಸುವ ಆಯ್ಕೆಗಳನ್ನು ಧೈರ್ಯ ಮಾಡಿ.
ನಮ್ಮ ಜೀವನದಲ್ಲಿ ಆಯ್ಕೆಗಳನ್ನು ಮಾಡಲು ದೇವರ ವಾಕ್ಯವು ಆಳವಾದ ಜ್ಞಾನವನ್ನು ಒದಗಿಸುತ್ತದೆ.
ಮಹತ್ವದ ನಿರ್ಧಾರಗಳನ್ನು ಎದುರಿಸುವಾಗ ದೇವರ ಮಾರ್ಗದರ್ಶನವನ್ನು ಅವಲಂಬಿಸಲು ಪವಿತ್ರಗ್ರಂಥದ ಸಲಹೆಯನ್ನು ನೆನಪಿಡಿ: ”ಪೂರ್ಣಹೃದಯದಿಂದ ಕರ್ತನಲ್ಲಿ ಭರವಸವಿಡು; ನಿನ್ನ ಸ್ವಂತ ಬುದ್ಧಿಯ ಮೇಲೆ ಆಧಾರ ಮಾಡಿಕೊಳ್ಳಬೇಡ. ನಿನ್ನ ಎಲ್ಲಾ ಮಾರ್ಗಗಳಲ್ಲಿ ಆತನನ್ನು ಸನ್ಮಾನಿಸು. ಆಗ ಆತನು ನಿನ್ನ ಮಾರ್ಗಗಳನ್ನು ಸರಾಗಮಾಡುವನು.”
ನಿಮ್ಮ ಹೃದಯದ ಸುತ್ತಲೂ ಸುತ್ತಲಾಗಿರುವ ಸತ್ಯದ ಬಲದಿಂದ ನೀವು ಮುಂದುವರಿಯಬೇಕು(ದೃಢವಾಗಿ ನಂಬಿದವುಗಳಲ್ಲಿ ನೆಲೆಯಾಗಿರಬೇಕು), ಈ ಎಲ್ಲ ವಿಷಯಗಳನ್ನುನಿಮಗೆ ನಿಜವಾಗಿಯೂ ಕಲಿಸಿದವನು ಆತನೆಂದು(ದೇವರು) ದೇವರಿಂದ ಭರವಸೆ ಪಡೆಯಲಾಗಿದೆ.
ಓ ಕರ್ತನೇ, ನಿನ್ನ ಮಾರ್ಗಗಳನ್ನು ನನಗೆ ತೋರಿಸು; ನಿನ್ನ ದಾರಿಗಳನ್ನು ನನಗೆ ಕಲಿಸು. ನಿನ್ನ ಸತ್ಯದಲ್ಲಿ ನನ್ನನ್ನು ನಡಿಸಿ ನನಗೆ ಕಲಿಸು; ನೀನು ನನ್ನ ರಕ್ಷಣೆಯ ದೇವರಾಗಿದ್ದೀ; ನಾನು ದಿನವೆಲ್ಲಾ ನಿನ್ನನ್ನು ನಿರೀಕ್ಷಿಸುತ್ತೇನೆ.
”ಮೋಸ ಹೊಗಬೇಡಿರಿ; ದೇವರು ಪರಿಹಾಸ್ಯ ಮಾಡಲ್ಪಡುವಾತನಲ್ಲ; ಯಾಕಂದರೆ ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು. ತನ್ನ ಶರೀರದಿಂದ ಬಿತ್ತುವವನು ಶರೀರದಿಂದ ನಾಶನವನ್ನು ಕೊಯ್ಯುವನು. ಆದರೆ ಆತ್ಮನಿಂದ ಬಿತ್ತುವವನು ಆತ್ಮನಿಂದ ನಿತ್ಯಜೀವವನ್ನು ಕೊಯ್ಯುವನು. ಒಳ್ಳೆದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರೋಣ. ಯಾಕಂದರೆ ನಾವು ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಕೊಯ್ಯುವೆವು.” (ಗಲಾತ್ಯ 6:7-9)
June 21
How great is your goodness, which you have stored up for those who fear you, which you bestow in the sight of men on those who take refuge in you.