ಪ್ರತಿದಿನವೂ, ಪ್ರತಿಯೊಂದು ಸಂಬಂಧದಲ್ಲೂ, ನಾವು ಬೀಜಗಳನ್ನು ಬಿತ್ತುತ್ತೇವೆ.
ಶಾಂತಿಯನ್ನು ಸ್ಥಾಪಿಸುವವನಾಗಲು, ನಾವು ದೇವರ ಜ್ಞಾನವನ್ನು ಅನುಸರಿಸಬೇಕು. ದೇವರ ಜ್ಞಾನವು ಆತನ ವಾಕ್ಯದಲ್ಲಿ ಪ್ರಕಟಗೊಂಡಿರುವುದರಿಂದ, ಧರ್ಮಗ್ರಂಥವನ್ನು(Scripture) ಅಧ್ಯಯನ ಮಾಡುವುದು ಜ್ಞಾನದಲ್ಲಿ ವರ್ಧಿಸಲು ಅಥವಾ ಬೆಳೆಯಲು ನಮ್ಮಲ್ಲಿರುವ ಅತ್ಯಂತ ಪರಿಣಾಮಕಾರಿಯಾದ ಸಾಧನವಾಗಿದೆ.
ಇತರರು ದೋಷಿಗಳೆಂದು ತೀರ್ಪುನೀಡುವ ಮಾನವನೇ, ನೀನು ಯಾರೇ ಆಗಿರು, ನೀನು ಮಾತ್ರ ನಿರ್ದೋಷಿಯೆಂದು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಇತರರಿಗೆ ತೀರ್ಪುನೀಡುವ ನೀನು ಅವರು ಮಾಡುವ ತಪ್ಪುಗಳನ್ನು ನೀನೂ ಮಾಡಿದೆಯಾದರೆ, ನಿನ್ನನ್ನು ನೀನೇ ದೋಷಿಯೆಂದು ತೀರ್ಪುಮಾಡಿಕೊಂಡ ಹಾಗಾಯಿತು
ಆದದರಿಂದ ನೀವು ದೇವರಿಂದ ಆರಿಸಿಕೊಂಡವರೂ ಪರಿಶುದ್ಧರೂ ಪ್ರಿಯರೂ ಆಗಿರುವಿರಿ. ಆದ್ದರಿಂದ ಅದಕ್ಕೆ ತಕ್ಕಂತೆ ದೇವರ ಸದ್ಗುಣಗಳನ್ನು ಧರಿಸಿಕೊಳ್ಳಿರಿ.
ನೀವು ಇತರರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವಾಗ ದೀರ್ಘಶಾಂತಿಯಿಂದ ಇರಿ. ಎಲ್ಲರೊಂದಿಗೆ ಕನಿಕರ ದಯೆ ದೀನಮನಸ್ಸು ಸಾತ್ವಿಕತ್ವದಿಂದ ಇರಿ.
ಸೌಮ್ಯ ಮತ್ತು ವಿನಮ್ರರಾಗಿರಿ, ಇತರರೊಂದಿಗೆ ನಿಮ್ಮ ತಾಳ್ಮೆಯನ್ನು ಕಳೆದುಕೊಳ್ಳಬೇಡಿ
ಯಾವನಿಗಾದರೂ ಒಬ್ಬನಿಗೆ ಇನ್ನೊಬ್ಬನ ಮೇಲೆ ವಿರೋಧವಾಗಿ ವ್ಯಾಜ್ಯವಿದ್ದರೂ ಒಬ್ಬರಿಗೊಬ್ಬರು ತಾಳಿಕೊಂಡು ಕ್ರಿಸ್ತನು ನಿಮ್ಮನ್ನು ಕ್ಷಮಿಸಿದಂತೆಯೇ ನೀವು ಒಬ್ಬರಿಗೊಬ್ಬರು ಕ್ಷಮಿಸಿರಿ.
ನೀವು ಯಾರೊಂದಿಗಾದರೂ ತಪ್ಪನ್ನು ಕಂಡುಕೊಂಡರೆ, ಅವರಿಗೆ ಅದೇ ಕ್ಷಮೆಯ ಉಡುಗೊರೆಯನ್ನು ಬಿಡುಗಡೆ ಮಾಡಿ. ಏಕೆಂದರೆ ಪ್ರೀತಿ ಅತ್ಯುನ್ನತವಾಗಿದೆ ಮತ್ತು ಪ್ರೀತಿಯು ಈ ಪ್ರತಿಯೊಂದು ಸದ್ಗುಣಗಳ ಮೂಲಕ ಹರಿಯಬೇಕು
ಪ್ರೀತಿ ಸತ್ಯವಾದ ಪರಿಪಕ್ವತೆಯ ಗುರುತಾಗಿದೆ. ಅದು ಸಂಪೂರ್ಣ ಮಾಡುವ ಬಂಧವಾಗಿದೆ.
ಶಾಂತಿಗಾಗಿ ಶ್ರಮಿಸುವವರು ಭಾಗ್ಯವಂತರು;ಅವರು ದೇವರ ಮಕ್ಕಳೆನಿಸಿಕೊಳ್ಳುವರು.
”ಸಮಾಧಾನಪಡಿಸುವವರು ಸಮಾಧಾನವೆಂಬ ಬೀಜವನ್ನು ಬಿತ್ತಿ ದೇವರೊಡನೆ ಸತ್ಸಂಬಂಧವೆಂಬ ಫಲವನ್ನು ಕೊಯ್ಯುತ್ತಾರೆ…..”(ಯಾಕೋಬ 3:18)
August 4
This is what the Lord says, he who made the earth, the Lord who formed it and established it—the Lord is his name: Call to me, and I will answer you and tell you