Welcome to JCILM GLOBAL

Helpline # +91 94453 51292 (Give A Missed Call)

ಸೈತಾನನು ನಿಮ್ಮನ್ನು ಹೊರತೆಗೆಯಲು ಸಾಧ್ಯವಾಗದಿದ್ದಾಗ, ಅವನು ನಿಮ್ಮನ್ನು ಬಳಲಿಸಲು ಪ್ರಯತ್ನಿಸುತ್ತಾನೆ – ಸುಸ್ತಾಗಬೇಡಿ, ಕಾಲವು ಬದಲಾಗುತ್ತದೆ..
ದುಷ್ಟನಾದ ಸೈತಾನನು ಕೆಳಗಿನವುಗಳನ್ನು ನಮ್ಮಿಂದ ಬಯಸುತ್ತಾನೆ…
1. ದೇವರನ್ನು ಅನುಮಾನಿಸುವುದು
ದೇವರನ್ನು ಅನುಮಾನಿಸಲು ಸೈತಾನನು ನಿಮ್ಮನ್ನು ಪ್ರಚೋದಿಸಿದಾಗ, ನಿಮ್ಮ ದೇವರನ್ನು ನಿರ್ಧರಿಸಲು ನಿಮ್ಮ ಪರಿಸ್ಥಿತಿಗೆ ಅನುಮತಿಸಬೇಡಿ; ನಿಮ್ಮ ದೇವರು ನಿಮ್ಮ ಪರಿಸ್ಥಿತಿಯನ್ನು ನಿರ್ಧರಿಸಲಿ..
2. ಭಯದಿಂದ ಜೀವಿಸಲು
ಭಯವು ವಿಶ್ವಾಸದ ಅನುಪಸ್ಥಿತಿಯಲ್ಲ, ಅದು ತಪ್ಪಾದ ಸ್ಥಾನದಲ್ಲಿ ಇರಿಸಿರುವುದಾಗಿದೆ. ಸೈತಾನನು ನಮ್ಮ ವಿಶ್ವಾಸವನ್ನು ಕಸಿದುಕೊಳ್ಳಲು ಬಯಸುವುದಿಲ್ಲ, ನಮ್ಮ ವಿಶ್ವಾಸವು ದೇವರನ್ನು ಹೊರತುಪಡಿಸಿ ಬೇರೆ ಯಾವುದರಲ್ಲಿಯಾದರೂ ಇರಬೇಕೆಂದು ಅವನು ಬಯಸುತ್ತಾನೆ. ಕ್ರಿಸ್ತನಲ್ಲಿನ ಜೀವನವು ಭಯದಲ್ಲಿನ ಜೀವನವಲ್ಲ!
ಕೀರ್ತನೆ 34 : 4 ಹೀಗೇಳುತ್ತದೆ, ”ನಾನು ಕರ್ತನನ್ನು ಹುಡುಕಿದೆನು; ಆಗ ಆತನು ನನಗೆ ಉತ್ತರಕೊಟ್ಟು ನನ್ನ ಸಕಲ ಭೀತಿಗಳಿಂದ ನನ್ನನ್ನು ಬಿಡಿಸಿದನು.”
3. ಅಸುರಕ್ಷಿತ ಭಾವನೆ
ನೀವು ಪ್ರೀತಿಪಾತ್ರರಾಗಿಲ್ಲ ಅಥವಾ ಸಾಕಷ್ಟು ಒಳ್ಳೆಯವರಲ್ಲ ಎಂದು ಸೈತಾನನು ನಿಮಗೆ ಹೇಳಲು ಬಿಡಬೇಡಿ! ”ನೀವು ದೇವರ ಕೈ ಕೆಲಸವಾಗಿದ್ದೀರಿ ಮತ್ತು ಕ್ರಿಸ್ತನಲ್ಲಿ, ನಾವು ಸಾಕಷ್ಟು ಒಳ್ಳೆಯವರಲ್ಲದೇ, ”ನಮ್ಮನ್ನು ಪ್ರಿತಿಸಿದಾತನ ಮೂಲಕವಾಗಿ ನಾವು ಈ ಎಲ್ಲವುಗಳಲ್ಲಿ ಜಯಶಾಲಿಗಳಿಗಿಂತಲೂ ಹೆಚ್ಚಿನವರಾಗಿದ್ದೇವೆ” (ಎಫೆಸಿ 2:10, ರೋಮ 8:37)..
4. ಯೇಸುವಿನ ವಿಶ್ವಾಸಿಗಳ ಚರ್ಚ್/ಸಮುದಾಯವನ್ನು ತಪ್ಪಿಸಲು
ನೀವು ನಿಮ್ಮನ್ನು ಕ್ರಿಸ್ತನ ದೇಹದೊಂದಿಗೆ ಹೆಚ್ಚು ತೊಡಗಿಸಿಕೊಳ್ಳದಿರುವಿರೋ, ನಿಮ್ಮ ವಿಶ್ವಾಸದಲ್ಲಿ ದೃಢವಾಗಿ ಉಳಿಯುವುದು ಕಷ್ಟ. ಅಲ್ಲದ ಈ ಲೋಕದಲ್ಲಿ ಯೇಸುವನ್ನು ಅನುಸರಿಸುವುದು ಸುಲಭವಲ್ಲ. ನಾವು ನಿರ್ಮಿಸಿದ ಸಮುದಾಯವನ್ನು ತೊರೆದಾಗ, ನಾವು ಕಬಳಿಸಲು ಉದ್ದೇಶಿಸುತ್ತೇವೆ.. (1 ಕೊರಿಂಥಿಯ ಅಧ್ಯಾಯ 12)
5. ದಾರಿ ತಪ್ಪಲು
ದೇವರ ವಾಕ್ಯದ ಸ್ಥಳಕ್ಕೆ ಬದಲಾಗಿ ನಮ್ಮ ಮೇಲೆ ಅಥವಾ ಲೌಕಿಕ ಜನರ ಮಾತುಗಳ ಮೇಲೆ ನಾವು ಅವಲಂಬಿತರಾದಾಗ, ನಾವೇ ಆತನ ಸತ್ಯದಿಂದ ದೂರ ಸರಿಯಬಹುದು ಮತ್ತು ಇತರರನ್ನು ಸಹ ಯೇಸುವಿನಿಂದ ದೂರ ಮಾಡಬಹುದು.
6. ವಿಫಲಗೊಳ್ಳಲು
ಸೈತಾನನು ನಮ್ಮನ್ನು ನಾಶಮಾಡಲು ಬಯಸುತ್ತಾನೆ. ಈ ಲೋಕ ನಮಗೆ ಏನು ಕೊಟ್ಟಿದೆಯೋ ಅದರಲ್ಲೇ ನಾವು ಇರಬೇಕೆಂದು ಮತ್ತು ನಮ್ಮ ಹಣೆಬರರಹವನ್ನು ಒಪ್ಪಿಕೊಳ್ಳಬೇಕೆಂದು ಅವನು ಬಯಸುತ್ತಾನೆ. ನೀವು ಸೋಲುತ್ತೀರಿ ಎಂದು ನೀವು ಭಾವಿಸಿದಾಗ, ಧೈರ್ಯದಿಂದಿರಿ, ಯೇಸು ಈಗಾಗಲೇ ನಿಮಗಾಗಿ ಗೆದ್ದಿದ್ದಾರೆ!
”ವಿಶ್ವಾಸರಹಿತನಾಗಿರಬೇಡ, ವಿಶ್ವಾಸಿಸು” ( ಯೋವಾನ್ನ 20:27)..
ಸೈತಾನನು ಸೋಲಿಸಲ್ಪಟ್ಟ ವೈರಿಯಾಗಿದ್ದಾನೆ ..
ನಾವು ಯೇಸುವಿನ ಮೇಲೆ ನಮ್ಮ ನಂಬಿಕೆ ಇಟ್ಟಾಗ, ಸೈತಾನನ ದಾಳಿಯನ್ನು ಜಯಿಸುವ ಶಕ್ತಿಯನ್ನು ನಾವು ಪಡೆಯುತ್ತೇವೆ..
ನಾವು ಯೇಸುವನ್ನು ಹಿಂಬಾಲಿಸುತ್ತಿರುವಾಗ ಮತ್ತು ಆತನು ಹೇಳಿದ್ದನ್ನು ಮಾಡುತ್ತಿರುವಾಗ, ಸೈತಾನನ ಯಾವುದೇ ಆಕ್ರಮಣವು ನಮ್ಮ ಪಾದಗಳಿಂದ ನಮ್ಮನ್ನು ಕೆಡವಲು ಸಾಧ್ಯವಿಲ್ಲ. ಮತ್ತು ನಮ್ಮ ನಂಬಿಕೆಯು ಯೇಸುವಿನಲ್ಲಿದ್ದಾಗ, ಸೈತಾನನ ಯಾವುದೇ ಆಕ್ರಮಣವು ಆತನ ಪ್ರೀತಿಯಿಂದ ನಮ್ಮನ್ನು ಬೇರ್ಪಡಿಸಲು ಸಾಧ್ಯವಿಲ್ಲ..
ಅದುವೇ ರೋಮ 8:38-39 ರಲ್ಲಿ ದೇವರ ವಾಗ್ದಾನವಾಗಿದೆ ”ಹೇಗಂದರೆ ಮರಣವಾಗಲಿ ಜೀವವಾಗಲಿ ದೂತರಾಗಲಿ ರಾಜತ್ವಗಳಾಗಲಿ ಅಧಿಕಾರಗಳಾಗಲಿ ಈಗಿನವುಗಳಾಗಲಿ ಮುಂಬರುವವುಗಳಾಗಲಿ, ಉನ್ನತವಾಗಲಿ ಅಗಾಧವಾಗಲಿ ಬೇರೆ ಯಾವ ಸೃಷ್ಟಿಯಾಗಲಿ ನಮ್ಮನ್ನು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ದೇವರ ಪ್ರೀತಿಯಿಂದ ಅಗಲಿಸಲಾರವೆಂದು ನನಗೆ ನಿಶ್ಚಯ ಉಂಟು.”..
ದೇವರು ನಿಮ್ಮಲ್ಲಿ ತನ್ನ ಒಳ್ಳೆಯ ಕೆಲಸವನ್ನು ಮಾಡುವವರೆಗೆ ಮತ್ತು ನಿಮ್ಮನ್ನು ಆಶೀರ್ವದಿಸುವವರೆಗೆ ನೀವು ಈ ಯುದ್ಧದಲ್ಲಿದ್ದೀರಿ ಎಂದು ದೇವರೇ ಅರಿಯಲಿ..!
ಬೈಬಲ್ ಸೈತಾನನನ್ನು ಪ್ರಬಲ ಮತ್ತು ಕುತಂತ್ರದ ಎದುರಾಳಿಯಾಗಿ ಪ್ರಸ್ತುತಪಡಿಸಿದರೂ, ಕ್ರೈಸ್ತರು ಈ ಶತ್ರುವಿನ ಮೇಲೆ ವಿಜಯವನ್ನು ಹೊಂದಬಹುದು ಎಂದು ಅದು ನಮಗೆ ಹೇಳುತ್ತದೆ..
”ಇಗೋ, ಸರ್ಪಗಳನ್ನೂ ಚೇಳುಗಳನ್ನೂ ತುಳಿಯುವದಕ್ಕೆ ಮತ್ತು ವಿರೋಧಿಯ ಎಲ್ಲಾ ಶಕ್ತಿಯ ಮೇಲೆ ನಾನು ನಿಮಗೆ ಅಧಿಕಾರ ಕೊಡುತ್ತೇನೆ; ಯಾವದೂ ಯಾವ ರೀತಿಯಲ್ಲಿಯೂ ನಿಮಗೆ ಕೇಡು ಮಾಡಲಾರದು…….” (ಲೂಕಾ 10:19)

Archives

August 4

This is what the Lord says, he who made the earth, the Lord who formed it and established it—the Lord is his name: Call to me, and I will answer you and tell you

Continue Reading »

August 3

The Lord does not look at the things man looks at. Man looks at the outward appearance, but the Lord looks at the heart. —1 Samuel 16:7. Have you ever wondered

Continue Reading »

August 2

Do not merely listen to the word and so deceive yourselves. Do what it says. —James 1:22. What we know and what we believe are not all that significant if

Continue Reading »