ನಾವು ಪಂಚಾಶತ್ತಮವನ್ನು ಆಚರಿಸುವಾಗ, ನಾವು ಪವಿತ್ರಾತ್ಮರ ಶಕ್ತಿ ಮತ್ತು ಬೆಂಕಿಯನ್ನು ಆಚರಿಸುತ್ತೇವೆ..!
ನಾವು ಪ್ರತಿದಿನವೂ ಹೇಗೆ ಜೀವಿಸುತ್ತೇವೆ ಎಂಬುದನ್ನು ಪರಿಗಣಿಸುವ ಅವಕಾಶವನ್ನು ಮತ್ತು ಪಶ್ಚಾತ್ತಾಪ ಪಡುವ ಅವಕಾಶವನ್ನು ಹಾಗು ಆತ್ಮರಿಂದ ಜೀವಿಸಲು ನಮ್ಮ ವಿಫಲತೆಯನ್ನು ಒಪ್ಪಿಕೊಳ್ಳಲು ಮತ್ತು ಕರ್ತನ ಶಕ್ತಿಯಿಂದ ನಮ್ಮನ್ನು ತುಂಬುವಂತೆ ಕೇಳಿಕೊಳ್ಳುವ ಅವಕಾಶವನ್ನು ಪವಿತ್ರಾತ್ಮರು ಪ್ರಸ್ತುತಪಡಿಸುತ್ತಾರೆ..
ನಮ್ಮ ಕ್ರಿಸ್ತೀಯ ಅನುಭವದ ಮೂಲಕ ನಾವು ಆತ್ಮರ ನೂತನ ತುಂಬುವಿಕೆಯನ್ನು ಅನುಭವಿಸಬೇಕು, ಆಗ ಮಾತ್ರ ನಾವು ಆನಂದದಿಂದ ಜೀವಿಸಬಹುದು, ಶಕ್ತಿಯುತವಾಗಿ ಸೇವೆ ಸಲ್ಲಿಸಬಹುದು ಮತ್ತು ನಾವು ಯೋಚಿಸುವ, ಮಾಡುವ ಮತ್ತು ಹೇಳುವ ಎಲ್ಲದರಲ್ಲೂ ದೇವರನ್ನು ಮಹಿಮೆಪಡಿಸಬಹುದು..
ತಂದೆಯು ನನ್ನ ಹೆಸರಿನಲ್ಲಿ ಕಳುಹಿಸಿಕೊಡುವ ಪರಿಶುದ್ಧಾತ್ಮನೆಂಬ ಆದರಿಕನೇ ಎಲ್ಲವುಗಳನ್ನು ನಿಮಗೆ ಬೋಧಿಸಿ ನಾನು ನಿಮಗೆ ಹೇಳಿದವುಗಳನ್ನೆಲ್ಲಾ ನಿಮ್ಮ ನೆನಪಿಗೆ ತರುವನು.
’’ಆದರೂ ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ; ನಾನು ಹೋಗುವದು ನಿಮಗೆ ಹಿತಕರವಾಗಿದೆ (ಒಳ್ಳೆಯದು, ಅನುಕೂಲಕರವಾದದ್ದು); ಯಾಕಂದರೆ ನಾನು ಹೋಗದಿದ್ದರೆ ಆದರಿಕನು((ಸಲಹೆಗಾರ, ಸಹಾಯಕ, ವಕೀಲ, ಮಧ್ಯಸ್ಥಗಾರ, ಬಲವರ್ಧಕ, ಜೊತೆಗಾರ) ನಿಮ್ಮ ಬಳಿಗೆ ಬರುವದಿಲ್ಲ(ನಿಮ್ಮೊಂದಿಗೆ ನಿಕಟ ಒಡನಾಟಕ್ಕೆ) ; ನಾನು ಹೋದರೆ ಆತನನ್ನು ನಿಮ್ಮ ಬಳಿಗೆ ಕಳುಹಿಸುವೆನು(ನಿಮ್ಮೊಂದಿಗೆ ನಿಕಟ ಒಡನಾಟದಲ್ಲಿರಲು )….’’( ಯೋವಾನ್ನ 16:7)
June 2
Christ was sacrificed once to take away the sins of many people, and he will appear a second time, not to bear sin, but to bring salvation to those who