ದೇವರು ನಿಮ್ಮನ್ನು ಆಶೀರ್ವದಿಸಲು ಬಯಸಿದಾಗ, ಅವರು ಒಬ್ಬ ವ್ಯಕ್ತಿಯನ್ನು ಕಳುಹಿಸುತ್ತಾರೆ; ಶತ್ರುವು ನಿಮ್ಮನ್ನು ನೋಯಿಸಲು ಬಯಸಿದಾಗ, ಆತನೂ ಒಬ್ಬ ವ್ಯಕ್ತಿಯನ್ನು ಕಳುಹಿಸುತ್ತಾನೆ – ಅದನ್ನು ಪಾಠವಾಗಿ ತೆಗೆದುಕೊಳ್ಳಲು ಜಾಗರೂಕರಾಗಿರಿ ಮತ್ತು ಸೇಡು ತೀರಿಸಿಕೊಳ್ಳಬೇಡಿ.
ಕರ್ತನು ನಮ್ಮ ಎಲ್ಲಾ ನಕಾರಾತ್ಮಕ ಭಾವನೆಗಳನ್ನು ನೋಡಿಕೊಳ್ಳುತ್ತಾರೆ ಮತ್ತು ಅವುಗಳನ್ನು ಪ್ರೀತಿ ಮತ್ತು ದಯೆಯಿಂದ ಬದಲಾಯಿಸುತ್ತಾರೆ, ಆತನು ನಮಗಾಗಿ ಉದ್ದೇಶಿಸಿರುವಂತೆಯೇ, ನಾವು ಅವುಗಳನ್ನು ಆತನ ಮೇಲೆ ಹಾಕಿದಾಗ ..!
ಹಿಂದಿನ ನೋವುಗಳನ್ನು ಹಿಡಿದಿಟ್ಟುಕೊಳ್ಳುವುದು ನಮ್ಮ ಮುಂದಿನ ಆಶೀರ್ವಾದಗಳನ್ನು ಸ್ವೀಕರಿಸಿಕೊಳ್ಳುವುದರಿಂದ ವಂಚಿತವಾಗುತ್ತೇವೆ. ಕ್ಷಮಿಸಿ, ಅದನ್ನು ಬಿಟ್ಟುಬಿಡಿ, ಸರಿಯಾಗಲು ಹಿಂದಿನ ಘಟನೆಗಳನ್ನು ಎಂದಿಗೂ ಬಳಸಬೇಡಿ.. ನಾವು ಪಾಪ ಮಾಡಿದಾಗ ಕರ್ತನು ನಮಗೆ ಹಾಗೆ ಮಾಡಲಿಲ್ಲ. ಬದಲಿಗೆ ನಾವು ಹಿಂದೆ ಮಾಡಿರುವುದನ್ನು ಕ್ಷಮಿಸಲು ಆತನು ಯೇಸುವನ್ನು ಕಳುಹಿಸಿದರು.
ಎಲ್ಲಾ ಕಹಿಭಾವನೆ, ಕ್ರೋಧ, ಕೋಪ, ಕಟುವಾದ ಮಾತುಗಳು ಮತ್ತು ನಿಂದೆಗಳನ್ನು ಮತ್ತು ಎಲ್ಲಾ ರೀತಿಯ ದುಷ್ಟ ನಡವಳಿಕೆಯನ್ನು ತೊಡೆದುಹಾಕಿ. ಬದಲಾಗಿ, ಕ್ರಿಸ್ತನ ಮೂಲಕ ದೇವರು ನಿಮ್ಮನ್ನು ಕ್ಷಮಿಸಿದಂತೆ, ಪರಸ್ಪರ ದಯೆಯಿಂದ, ಕೋಮಲ ಹೃದಯದಿಂದ, ಒಬ್ಬರನ್ನೊಬ್ಬರು ಕ್ಷಮಿಸಿ.
ಮೃದುವಾದ ಪ್ರತ್ಯುತ್ತರವು ಕೋಪವನ್ನು ತಿರುಗಿಸಿಬಿಡುತ್ತದೆ; ತೀಕ್ಷ್ಣವಾದ ಮಾತುಗಳು ಕೋಪವನ್ನು ಎಬ್ಬಿಸುತ್ತವೆ.
’’ಎಲ್ಲಾ ದ್ವೇಷ, ಕೋಪ, ಕ್ರೋಧ, ಕಲಹ, ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನವನ್ನೂ ನಿಮ್ಮಿಂದ ದೂರ ಮಾಡಿರಿ. ದೇವರು ನಿಮಗೆ ಕ್ರಿಸ್ತನಲ್ಲಿ ಕ್ಷಮಿಸಿದಂತೆಯೇ ನೀವು ಒಬ್ಬರಿಗೊಬ್ಬರು ಉಪಕಾರಿಗಳಾಗಿಯೂ ಕರುಣೆಯುಳ್ಳವರಾಗಿಯೂ ಕ್ಷಮಿಸುವವರಾಗಿಯೂ ಇರ್ರಿ….’’ (ಎಫೆಸಿ 4:31-32)
May 12
There is now no condemnation for those who are in Christ Jesus, because through Christ Jesus the law of the Spirit of life in Christ has set me free from