ದೇವರು ನಮ್ಮನ್ನು ಪ್ರಚೋದನೆಗೀಡುಮಾಡುವುದಿಲ್ಲ ಆದರೆ ಪರೀಕ್ಷೆಗಳ ಮೂಲಕ ಹಾದು ಹೋಗಲು ನಮ್ಮನ್ನು ಅನುಮತಿಸುತ್ತಾರೆ. ಪರೀಕ್ಷೆಗಳು ನಮ್ಮನ್ನು ಮುರಿಯಲು ಅಥವಾ ಅಲುಗಾಡಿಸಲು ಇರುವುದಲ್ಲ ಆದರೆ ಮುಂದಿನ ಹಂತದ ಪ್ರಬುದ್ಧತೆಗೆ ಮತ್ತು ತಾಳ್ಮೆಗೆ ನಮ್ಮನ್ನು ಉತ್ತೇಜಿಸುತ್ತದೆ(ಬಡ್ತಿ ನೀಡುತ್ತದೆ)
ವಿದ್ಯಾರ್ಥಿಯು ಪರೀಕ್ಷೆಯಲ್ಲಿ ಉತ್ತೀರ್ಣನಾಗದೆ ಮುಂದಿನ ತರಗತಿಗೆ ಹೋಗುವುದಿಲ್ಲ ಅಥವಾ ಓಟದಲ್ಲಿ ಓಡದೆಯೇ ಕ್ರೀಡಾಪಟು ಕಿರೀಟವನ್ನು ಗೆಲ್ಲುವುದಿಲ್ಲ.
ನನ್ನ ಸಹೋದರ ಸಹೋದರಿಯರೇ, ನಿಮಗೆ ಅನೇಕ ತೊಂದರೆಗಳು ಬರುತ್ತವೆ. ಆದರೆ ಅವುಗಳು ಬಂದಾಗ ನೀವು ಬಹಳ ಸಂತೋಷಪಡಬೇಕು. ಏಕೆಂದರೆ ಅವುಗಳು ನಿಮ್ಮ ನಂಬಿಕೆಯನ್ನು ಪರಿಶೋಧಿಸಲು ಬಂದಿವೆ ಎಂಬುದು ನಿಮಗೆ ತಿಳಿದದೆ. ಅವು ನಿಮ್ಮಲ್ಲಿ ತಾಳ್ಮೆಯನ್ನು ಉಂಟುಮಾಡುತ್ತವೆ. ತಾಳ್ಮೆಯು ತನ್ನ ಕಾರ್ಯವನ್ನು ಪೂರೈಸಲಿ. ಆಗ ನೀವು ನಿಷ್ಕಳಂಕರೂ ಮತ್ತು ಪರಿಪೂರ್ಣರೂ ಆಗುವಿರಿ ಮತ್ತು ನಿಮಗೆ ಬೇಕಾದುದೆಲ್ಲವೂ ದೊರೆಯುವುದು.
ಹಿಂದಿನ ಕಾಲದಲ್ಲಿ ಬರೆಯಲ್ಪಟ್ಟಿರುವ ಪ್ರತಿಯೊಂದೂ ನಮ್ಮ ಉಪದೇಶಕ್ಕಾಗಿಯೇ ಬರೆಯಲ್ಪಟ್ಟಿದೆ. ನಾವು ನಿರೀಕ್ಷೆ ಉಳ್ಳವರಾಗಿರಬೇಕೆಂದು ಆ ಸಂಗತಿಗಳು ಬರೆಯಲ್ಪಟ್ಟಿವೆ. ಪವಿತ್ರ ಗ್ರಂಥವು ನಮಗೆ ಕೊಡುವ ತಾಳ್ಮೆಯಿಂದಲೂ ಶಕ್ತಿಯಿಂದಲೂ ಈ ನಿರೀಕ್ಷೆ ಬರುತ್ತದೆ.
ನೀವು ಸಹಿಸಿಕೊಳ್ಳಲು ಮತ್ತು ತಾಳ್ಮೆಯಿಂದಿರಲು ಬೇಕಾದುದು ಆತನ ಬಲದಲ್ಲಿದೆ. ಆತನೇ ನಿಮ್ಮನ್ನು ಕೊಂಡೊಯ್ಯುವನು..
‘’ನಿಮ್ಮ ನಂಬಿಕೆಯು ಪರಿಶುದ್ಧವಾಗಿದೆ ಎಂಬುದನ್ನು ಪ್ರಕಟಿಸಲು ಈ ತೊಂದರೆಗಳು ಸಂಭವಿಸುತ್ತವೆ. ನಿಮ್ಮ ನಂಬಿಕೆಯ ಪರಿಶುದ್ಧತೆಯು ಬಂಗಾರದ ಮೌಲ್ಯಕ್ಕಿಂತಲೂ ಹೆಚ್ಚಿನದಾಗಿದೆ. ಬಂಗಾರವು ನಶಿಸಿಹೋಗುವಂಥದ್ದಾಗಿದ್ದರೂ ಅದನ್ನು ಬೆಂಕಿಯಲ್ಲಿ ಪುಟ ಹಾಕಿ ಅದರ ಪರಿಶುದ್ಧತೆಯನ್ನು ಶೋಧಿಸುವರು. ಯೇಸು ಕ್ರಿಸ್ತನು ಪ್ರತ್ಯಕ್ಷನಾದಾಗ, ನಿಮ್ಮ ನಂಬಿಕೆಯ ಪರಿಶುದ್ಧತೆಯು ನಿಮಗೆ ಕೀರ್ತಿ, ಪ್ರಭಾವ ಮತ್ತು ಗೌರವಗಳನ್ನು ತರುತ್ತದೆ…..’’ (1 ಪೇತ್ರ 1:7)
July 14
“If you obey my commands, you will remain in my love, just as I have obeyed my Father’s commands and remain in his love.” —John 15:10. Love is much more