ಅನೇಕ ಬಾರಿ ದೇವರು ನಮ್ಮ ಹೃದಯದಲ್ಲಿ ಇಟ್ಟಿದ್ದನ್ನು ನಾವು ತೆಗೆದುಕೊಳ್ಳುತ್ತೇವೆ ಮತ್ತು ನಮಗೆ ಸ್ವಾಭಾವಿಕವಾಗಿಅಂದರೆ ನಮ್ಮ ಪಂಚೇಂದ್ರಿಯಗಳಿಗೆ ಅರ್ಥವಾಗುವಂತೆ ಅದನ್ನು ಕೆಳಮಟ್ಟಕ್ಕೆ ತರುತ್ತೇವೆ.
ನಮ್ಮ ವಿಶ್ವಾಸವನ್ನು ಬಿಡುಗಡೆ ಮಾಡುವ ಬದಲು, ಅಸಾಧಾರಣವಾದದ್ದನ್ನು ನಂಬುವ ಮತ್ತು ಅಸಾಧ್ಯವಾದುವುಗಳಿಗಾಗಿ ದೇವರ ಮಟ್ಟಕ್ಕೆ ಏರುವ ಬದಲು, ಇಷ್ಟೇ ಒಳ್ಳೆಯದು ಸಾಕೆಂದು ನಾವು ಯೋಚಿಸುವುದಕ್ಕೆ ನೆಲೆಗೊಳ್ಳುತ್ತೇವೆ/ಸೀಮಿತಗೊಳಿಸುತ್ತೇವೆ.
ಇಂದು ದೇವರನ್ನು ಮಿತಿಗೊಳಿಸುವುದನ್ನು ತೊಡೆದುಹಾಕಿ..!
ಕ್ರೈಸ್ತರ ಜೀವನವು ಅಲೌಕಿಕವಾದ ಜೀವನ ಆಗಿರಬೇಕು..
ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ–ನನ್ನನ್ನು ನಂಬುವವನು ನಾನು ಮಾಡುವ ಕ್ರಿಯೆಗಳನ್ನು ಸಹ ಮಾಡುವನು; ಇವುಗಳಿಗಿಂತ ಮಹತ್ತಾದ ಕ್ರಿಯೆಗಳನ್ನು ಅವನು ಮಾಡುವನು; ಯಾಕಂದರೆ ನಾನು ನನ್ನ ತಂದೆಯ ಬಳಿಗೆ ಹೋಗುತ್ತೇನೆ!
ನಿರೀಕ್ಷೆಯು ಅದ್ಬುತಗಳಿಗೆ ಉತ್ಪತ್ತಿಯ ನೆಲವಾಗಿದೆ (ಆಗರವಾಗಿದೆ)
’’ಆಗ ಕರ್ತನು ಮೋಶೆಗೆ ಹೇಳಿದ್ದೇನಂದರೆ–ಕರ್ತನ ಕೈ ಮೋಟು ಗೈಯೋ? ನನ್ನ ಮಾತು ನೆರವೇರುತ್ತದೋ ಇಲ್ಲವೋ ನೀನು ನೋಡುವಿ ಅಂದನು….’’(ಸಂಖ್ಯಾಕಾಂಡ 11:23)
September 18
Do nothing out of selfish ambition or vain conceit, but in humility consider others better than yourselves. Each of you should look not only to your own interests but also