ಇದು ನಿರಾಶಾವಾದದ(ಹತಾಶವಾದ) ಯುಗ, ಆದರೂ ನಮ್ಮದು ವಿಶ್ವಾಸದ ಧ್ಯೇಯ, ಕರ್ತನಲ್ಲಿನ ಆನಂದದ ಧ್ಯೇಯ ..!
ವಿಶ್ವಾಸವು ಈ ಭೂಮಿಯ ಮೇಲೆ ಕರ್ತನು ಎಸಗಿರುವ/ಮಾಡಿರುವ ಕಾರ್ಯ ಮತ್ತು ಯೇಸು ಶಿಲುಬೆಯಲ್ಲಿ ನಮಗಾಗಿ ಏನು ಮಾಡಿದರು ಎಂಬುದರ ಬಗ್ಗೆ ಇರುವ ಸಾಕ್ಷ್ಯ ಮತ್ತು ಶಕ್ತಿಯ ಆಧಾರವಾಗಿದೆ.
ಇದು ಜನರ ಹೃದಯದಲ್ಲಿ ಕಂಡುಬರುತ್ತದೆ
ನಾವು ಪ್ರತಿಬಾರಿಯೂ ದೇವರ ವಾಕ್ಯದೊಂದಿಗೆ ಪ್ರಾರ್ಥಿಸುವಾಗಲೆಲ್ಲಾ, ನಾವು ನಮ್ಮ ವಿಶ್ವಾಸವನ್ನು ಬಲಪಡಿಸಿಕೊಳ್ಳುತ್ತೇವೆ ಮತ್ತು ದೇವರ ಪ್ರತಿಯೊಂದು ವಾಗ್ದಾನವು ಸರಿಯಾದ ಸಾಲಿನಲ್ಲಿ ಬಂದು ನಿಲ್ಲುತ್ತದೆ.
ಆದ್ದರಿಂದ ನೀವು ಏನನ್ನು ನಂಬಿರುವಿರೋ ಅದನ್ನು ಘೋಷಿಸುವುದನ್ನು ಮುಂದುವರಿಸಿ, ಏಕೆಂದರೆ ದೇವರು ತನ್ನ ವಿಶ್ವಾಸ ತುಂಬಿದ ಭಕ್ತರಿಗೆ(ನಂಬಿಗಸ್ತರಿಗೆ) ವಿಧಿಸಿದ್ದನ್ನು(ಮೊದಲೇ ಗೊತ್ತು ಮಾಡಿರುವುದನ್ನು) ಮನುಷ್ಯನು ನಿಮ್ಮಿಂದ ತೆಗೆದುಕೊಳ್ಳಲು/ಕಸಿದುಕೊಳ್ಳಲು ಸಾಧ್ಯವಿಲ್ಲ.
ನಾವು ಯಾವ ಸಂದೇಹಗಳೂ ಇಲ್ಲದೆ ದೇವರ ಬಳಿಗೆ ಬರಲು ಸಾಧ್ಯವಿದೆ. ಇದರ ಅರ್ಥವೇನೆಂದರೆ (ದೇವರ ಚಿತ್ತಕ್ಕನುಸಾರವಾಗಿ) ನಮಗೆ ಬೇಕಾದವುಗಳಿಗಾಗಿ ದೇವರನ್ನು ಕೇಳಿಕೊಂಡರೆ ಆತನು ನಮ್ಮ ವಿಜ್ಞಾಪನೆಯನ್ನು ಕೇಳುತ್ತಾನೆ.
”ಆದದರಿಂದ ನಾವು ಕರುಣೆಯನ್ನು ಹೊಂದುವಂತೆಯೂ ಆತನ ಕೃಪೆಯಿಂದ ಸಮಯೋಚಿತವಾದ ಸಹಾಯವು ನಮಗೆ ದೊರೆಯುವಂತೆಯೂ ಧೈರ್ಯದಿಂದ ಕೃಪಾ ಸಿಂಹಾಸನದ ಬಳಿಗೆ ಬರೋಣ….”(ಹಿಬ್ರಿಯ 4:16)
September 18
Do nothing out of selfish ambition or vain conceit, but in humility consider others better than yourselves. Each of you should look not only to your own interests but also