ಒಂದು ಕಾಲು ಜಾರಿಬಿದ್ದಾಗ ನಿಮ್ಮ ಸಮತೋಲನವನ್ನು ನೀವು ಮರಳಿ ಪಡೆಯಬಹುದು, ಆದರೆ, ನಿಮ್ಮ ಬಾಯಿ ಜಾರಿಬಿದ್ದಾಗ ನಿಮ್ಮ ವ್ಯಕ್ತಿತ್ವವನ್ನು ಪುನಃ ನಿರ್ಮಿಸಲು ಕಷ್ಟವಾಗುತ್ತದೆ.
ಪ್ರಬುದ್ಧತೆಯಿಲ್ಲದೆ ಎದುರುತ್ತರ (ಮರಳಿ ಉತ್ತರ) ನೀಡುವಾಗ ಜಾಗರೂಕರಾಗಿರಿ ಏಕೆಂದರೆ ಪ್ರತಿಯೊಂದು ಕ್ರಿಯೆಗೂ ಸಮಾನವಾದ ಪರಿಣಾಮವಿದೆ.
ನಿಮ್ಮ ಬಾಯಿಯು ನಿಮ್ಮನ್ನು ಪಾಪಕ್ಕೆ ಕರೆದೊಯ್ಯಲು ಬಿಡಬೇಡಿ
ಜೀವವನ್ನು ಪ್ರೀತಿಸಿ ಸುದಿನಗಳನ್ನು ನೋಡುವದಕ್ಕೆ ಇಷ್ಟವುಳ್ಳವನು ಕೆಟ್ಟದ್ದನ್ನು ನುಡಿಯದಂತೆ ತನ್ನ ನಾಲಿಗೆಯನ್ನೂ ವಂಚನೆಯ ಮಾತುಗಳನ್ನಾಡದ ಹಾಗೆ ತನ್ನ ತುಟಿಗಳನ್ನೂ ಬಿಗಿ ಹಿಡಿಯಲಿ.
ನಿಮ್ಮಲ್ಲಿ ಭಕ್ತನೆಂದೆಣಿಸಿಕೊಳ್ಳುವ ಯಾವನಾದರೂ ತನ್ನ ನಾಲಿಗೆಗೆ ಕಡಿವಾಣವನ್ನು ಹಾಕದೆ ತನ್ನ ಹೃದಯವನ್ನು ಮೋಸಗೊಳಿಸುವವನಾದರೆ ಅವನ ಭಕ್ತಿ ನಿಷ್ಪ್ರಯೋಜನವಾಗಿದೆ.
ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತೂ ಹೊರಡಬಾರದು; ಆದರೆ ಭಕ್ತಿಯನ್ನು ವೃದ್ಧಿ ಮಾಡುವಂಥ ಒಳ್ಳೆಮಾತು ಇದ್ದರೆ ಕೇಳುವವರ ಹಿತಕ್ಕಾಗಿ ಅದನ್ನು ಆಡಿರಿ.
ಓ ಕರ್ತನೇ, ನನ್ನ ಬಾಯಿಗೆ ಕಾವಲಿಡು; ನನ್ನ ತುಟಿಗಳ ಕದವನ್ನು ಕಾಯಿ.
ಸಹೋದರರೇ, ಒಬ್ಬನು ಒಂದು ದೋಷದಲ್ಲಿ ಸಿಕ್ಕಿದರೆ ಅಂಥವನನ್ನು ಆತ್ಮಿಕರಾದ ನೀವು ಸಾತ್ವಿಕಭಾವದಿಂದ ಯಥಾಸ್ಥಾನ ಪಡಿಸಿರಿ; ನೀನಾದರೋ ಶೋಧನೆಗೆ ಒಳಗಾಗದಂತೆ ನಿನ್ನ ವಿಷಯದಲ್ಲಿ ಎಚ್ಚರಿಕೆಯಾಗಿರು.(ಗಲಾತ್ಯ 6:1)
May 7
[The Lord said to Israel,] “I am the Lord your God, who brought you out of Egypt, out of the land of slavery. You shall have no other gods before me.” — Deuteronomy