ಒಂದು ಮಹತ್ವದ ತಿರುವನ್ನು ಪಡೆದ ಪ್ರಾರ್ಥನೆಯ ಫಲಿತಾಂಶವೆಂದರೆ; ದೇವರು ನಿಮ್ಮ ಯುದ್ಧಗಳನ್ನು ಹೇಗೆ ಆಶೀರ್ವಾದವಾಗಿ ಪರಿವರ್ತಿಸುತ್ತಾರೆ ಎಂದು ನೀವು ನೋಡುತ್ತಾ ಹೋದಂತೆ ಇನ್ನೂ ಹೆಚ್ಚಾಗಿ ದೇವರನ್ನು ಆರಾಧಿಸಲು/ಸ್ತುತಿಸಲು ಬಯಸುತ್ತೀರಿ ಮತ್ತು ನಂಬಿಕೆಯಿಲ್ಲದವರೂ ಸಹ ಅದನ್ನು ಗಮನಿಸುತ್ತಾರೆ – ನೀವು ಆಶೀರ್ವಾದ ಪಡೆಯುತ್ತೀರಿ ಹಾಗೂ ದೇವರು ಗೌರವ ಮತ್ತು ಮಹಿಮೆಯನ್ನು ಪಡೆಯುತ್ತಾರೆ.
ನೀವು ನಿಮ್ಮ ಚಿಂತೆಯನ್ನು ಸ್ತುತಿಯಾರಾಧನೆಯ ಕಡೆಗೆ ತಿರುಗಿಸಿದಾಗ ದೇವರು ನಿಮ್ಮ ಯುದ್ಧಗಳನ್ನು ಆಶೀರ್ವಾದವಾಗಿ ಪರಿವರ್ತಿಸುತ್ತಾರೆ.
ಆ ಯುದ್ಧದ ಮಧ್ಯದಲ್ಲಿ ನಿಮ್ಮ ಅತಿಶ್ರೇಷ್ಠ ಆಯುಧವು ಸ್ತುತಿಯಾಗಿದೆ(Praise) ಏಕೆಂದರೆ ಅಂಥ ಬಿಕ್ಕಟ್ಟಿನ ಸಮಯ ಅಥವಾ ಪರಿಸ್ಥಿತಿಯಲ್ಲಿ ನಿಮ್ಮ ಸ್ತುತಿ ಮತ್ತು ಕೃತಜ್ಞತೆಯನ್ನು ಸ್ವರ್ಗದ ಕಡೆಗೆ ಎತ್ತುವುದನ್ನು ಶತ್ರುವು ಕೇಳಿದಾಗ ಅವನು ಓಡಿಹೋಗುತ್ತಾನೆ. ಸ್ತುತಿಯಲ್ಲದೆ ಬೇರಾವುದೂ ಕೂಡ ಅವನನ್ನು ಅಷ್ಟು ವೇಗವಾಗಿ ಪಲಾಯನ ಆಗುವಂತೆ ಮಾಡಲಾರದು.
ಚಿಂತೆ ಎಂದರೆ ಸಂಪೂರ್ಣವಾಗಿ ನಮ್ಮ ಮೇಲೆ ನಾವು ಕೇಂದ್ರೀಕೃತವಾಗುವುದು, ಆದರೆ ಸ್ತುತಿ/ಆರಾಧನೆ ಎಂದರೆ ಸಂಪೂರ್ಣವಾಗಿ ಇನ್ನೊಬ್ಬರ ಮೇಲೆ ಕೇಂದ್ರೀಕೃತವಾಗುವುದು – ಅದು ದೇವರ ಮೇಲೆ.
ಕರ್ತನ ಸಮ್ಮುಖದಲ್ಲಿ ಪೂರ್ಣ ಹೃದಯವುಳ್ಳವರ ನಿಮಿತ್ತ ಬಲವನ್ನು ತೋರಿಸುವದಕ್ಕೆ ಆತನ ಕಣ್ಣುಗಳು ಸಮಸ್ತ ಭೂಮಿಯಲ್ಲಿ ಓಡಾಡುತ್ತವೆ.
”ದೇವರಾದ ಕರ್ತನನ್ನು ನಂಬಿಕೊಳ್ಳಿರಿ, ಸ್ಥಿರವಾಗಿರ್ರಿ; ಆಗ ಜಯಹೊಂದುವಿರಿ(ಭದ್ರವಾಗಿರುವಿರಿ)…” (2 ಪೂ.ಕಾ.ಇ 20 : 20)
September 18
Do nothing out of selfish ambition or vain conceit, but in humility consider others better than yourselves. Each of you should look not only to your own interests but also