ನೀವು ಏನನ್ನು ಅಥವಾ ಯಾವುದನ್ನು ನಂಬುತ್ತೀರಿ ಎಂಬುದರ ಮೇಲೆ ನೀವು ಯಾರಾಗಿದ್ದೀರಿ ಎಂದು ನಿರ್ಧರಿಸಲಾಗುತ್ತದೆ.
ನಿಮ್ಮನ್ನು ‘ಆರಾಮದಾಯಕ’ ನನ್ನಾಗಿ ಮಾಡಲು ಪ್ರಯತ್ನಿಸುವ ಸೈತಾನನ ಪ್ರತಿಯೊಂದು ಸುಳ್ಳು ಮತ್ತು ಮಿತಿಯನ್ನು ವಿರೋಧಿಸಿ.
ಅವಕಾಶ ಮತ್ತು ಉದ್ದೇಶದ ನಡುವೆ ವ್ಯತ್ಯಾಸವಿದೆ – ತೆರೆಯಲ್ಪಟ್ಟಿರುವ ಪ್ರತಿಯೊಂದು ಬಾಗಿಲು ನೀವು ತಲುಪಬೇಕಾದ ನಿಮ್ಮ ನಿರ್ಧಿಷ್ಠ ಸ್ಥಾನಕ್ಕೆ(ಗುರಿಗೆ) ನಿಮ್ಮನ್ನು ಕರೆದೊಯ್ಯುವುದಿಲ್ಲ.
ದೇವರು ತೆರೆಯುವ ಬಾಗಿಲು ಎಂದಿಗೂ ಅವರ ವಾಕ್ಯಕ್ಕೆ ವಿರುದ್ಧವಾಗಿರುವುದಿಲ್ಲ ಎಂದು ಅರಿಯುವುದೇ, ಆ ಅವಕಾಶವು ನಿಜವಾಗಿಯೂ ದೇವರಿಂದ ತೆರೆಯಲ್ಪಟ್ಟಿರುವ ಬಾಗಿಲಾಗಿದೆಯೇ ಇಲ್ಲವೇ ಎಂಬುದನ್ನು ಗ್ರಹಿಸುವ ಕೀಲಿಯಾಗಿದೆ.
ಆದ್ದರಿಂದ ನೀವು ರಾಜಿ ಮಾಡಿಕೊಳ್ಳುವಂತೆ ಮಾಡುವ ಮತ್ತು ನಿಮ್ಮನ್ನು ಪಾಪದ ಕಡೆಗೆ ಕರೆದೊಯ್ಯುವ ವಿಷಯಗಳು ಅಥವಾ ಜನರ ಸುತ್ತ ಆರಾಮವಾಗಿ ಇರಬೇಡಿ.
ನೀವು ರಾಜಧಿರಾಜನ ಡಿಎನ್ಎಯನ್ನು ನಿಮ್ಮೊಂದಿಗೆ ಕರೆದೊಯ್ಯುವುದನ್ನು ಎಂದಿಗೂ ಮರೆಯದಿರಿ.
”ಸಾವಿರ ದಿವಸಗಳಿಗಿಂತ ನಿನ್ನ ಅಂಗಳಗ ಳಲ್ಲಿ ಇರುವ ಒಂದು ದಿನವು ಒಳ್ಳೇದಾಗಿದೆ; ದುಷ್ಟರ ಗುಡಾರಗಳಲ್ಲಿ ವಾಸಮಾಡುವದಕ್ಕಿಂತ ನನ್ನ ದೇವರ ಆಲಯದ ಬಾಗಿಲನ್ನು ಕಾಯುವವನಾಗಿರುವದು ನನಗೆ ಒಳ್ಳೆಯದು….”(ಕೀರ್ತನೆ 84:10)
July 14
“If you obey my commands, you will remain in my love, just as I have obeyed my Father’s commands and remain in his love.” —John 15:10. Love is much more