ಅಂಕಿ ಅಂಶಗಳನ್ನು ಜಾಣ್ಮೆಯಿಂದ ತಿರುಚಿ ಹಾಕಬಹುದು, ಛಾಯಾ ಚಿತ್ರಗಳನ್ನು ನಕಲಿ ಮಾಡಬಹುದು, ನಿಯತಕಾಲಿಕೆಗಳು ಬಣ್ಣ ಬಣ್ಣವಾಗಿ ಚಿತ್ರಲ್ಪಡಬಹುದು(ವಿಶೇಷವಾಗಿ ಹೆಚ್ಚು ಸುಂದರವಾಗಿ ಕಾಣುವಂತೆ ಮಾಡಲು ಅಥವಾ ಪರಿಪೂರ್ಣವಾಗಿಸಲು ಬದಲಾಯಿವುದು); ನಮ್ಮ ಮಾರ್ಗದರ್ಶಕರು, ಸ್ನೇಹಿತರು, ವಿಜ್ಞಾನ ಮತ್ತು ನಮ್ಮ ಕಣ್ಣುಗಳೂ ಸಹ ನಮ್ಮನ್ನು ಮೋಸಗೊಳಿಸಬಹುದು, ಆದರೆ ದೇವರ ವಾಕ್ಯವು ಸತ್ಯವಾದುದು ಮತ್ತು ಸ್ವರ್ಗದಲ್ಲಿ ದೃಢವಾಗಿ ಸ್ಥಿರಗೊಂಡಿರುವುದಾಗಿದೆ.
ಪವಿತ್ರ ಗ್ರಂಥದ ವಾಕ್ಯಗಳು ಹೇಳುವಂತೆ ‘’ನರಜಾತಿಯೆಲ್ಲಾ ಹುಲ್ಲಿನ ಹಾಗಿದೆ. ಮನುಷ್ಯನ ಪ್ರಭಾವವೆಲ್ಲಾ ಹುಲ್ಲಿನ ಹೂವಿನಂತಿದೆ’. ಹುಲ್ಲು ಒಣಗಿ ಹೋಗುವದು, ಅದರ ಹೂವು ಉದುರಿ ಹೋಗುವದು; ಕರ್ತನ ಮಾತೋ ಸದಾಕಾಲವೂ ಇರುವದು”. ಅದು ಯಾವದಂದರೆ ನಿಮಗೆ ಸಾರಲ್ಪಟ್ಟ ಸುವಾರ್ತಾವಾಕ್ಯವೇ.
ಯಾವ ವಿಮರ್ಶೆಗಳು ಏನೇ ಹೇಳಿದರೂ, ತಿರುಚಿಹಾಕುವುದರಿಂದ ಅಥವಾ ಅನುವಾದದಿಂದ ದೇವರ ವಾಕ್ಯವನ್ನು ಬದಲಾಯಿಸಲಾಗುವುದಿಲ್ಲ
ಆಕಾಶವೂ ಭೂಮಿಯೂ ಅಳಿದುಹೋಗುವವು; ಆದರೆ ನನ್ನ ಮಾತುಗಳು ಅಳಿದುಹೋಗುವದೇ ಇಲ್ಲ.
ಎಲ್ಲಕ್ಕಿಂತ ಹೆಚ್ಚಾಗಿ, ನಮ್ಮಲ್ಲಿ ಯಾರಿಗೂ ಪವಿತ್ರಗ್ರಂಥದಲ್ಲಿನ ಭವಿಷ್ಯವಾಣಿಯನ್ನು ನಮ್ಮಷ್ಟಕ್ಕೆ ನಾವೇ ವಿವರಿಸಲು ಸಾಧ್ಯವಿಲ್ಲ ಎಂಬುದನ್ನು ನೆನಪಿಡಿ. ಯಾಕೆಂದರೆ ಯಾವುದೇ ಪ್ರವಾದಿಯ ಸಂದೇಶವು ಮಾನವ ಇಚ್ಛೆಯಿಂದ(ಚಿತ್ತದಿಂದ)ಬಂದಿಲ್ಲ, ಆದರೆ ದೇವರಿಂದ ಬಂದ ಸಂದೇಶವನ್ನು ಮಾತನಾಡುವಾಗ ಜನರು ಪವಿತ್ರಾತ್ಮರ ನಿಯಂತ್ರಣದಲ್ಲಿದ್ದರು.
ಓ ಕರ್ತನೇ, ಎಂದೆಂದಿಗೂ ನಿನ್ನ ವಾಕ್ಯವು ಪರಲೋಕದಲ್ಲಿ ಸ್ಥಿರವಾಗಿದೆ.( ಕೀರ್ತನೆ – 119:89)
May 19
In the same way, let your light shine before men, that they may see your good deeds and praise your Father in heaven. —Matthew 5:16 As Christians, we are not