ಶಾಂತಿ, ಶಕ್ತಿ ಮತ್ತು ಸ್ವಸ್ಥತೆಯ ದೈವೀಕ ನಿಯಮಗಳನ್ನು ತೋರ್ಪಡಿಸುವ ಮೂಲಕ ಬಿರುಸಾದ ಬಿರುಗಾಳಿಗಳು, ಹಿಂಸಾಚಾರ, ತೀವ್ರ ಅನಾರೋಗ್ಯ ಮತ್ತು ಮುಂತಾದವುಗಳಾಗಿ ಕಾಣಿಸಿಕೊಂಡು ಅಸ್ತವ್ಯಸ್ತವಾಗಿರುವ ಘಟನೆಗಳಿಗೆ ಕ್ರಿಸ್ತ ಯೇಸುವನ್ನು ಸವಾಲು ಮಾಡುವ ಹೊಸ ಒಡಂಬಡಿಕೆಯು ಸಾಕ್ಷಿಯಾಗಿದೆ..
ಆಧ್ಯಾತ್ಮಿಕ ಅಧಿಕಾರ ಮತ್ತು ನಿರ್ಭಯತೆಯೊಂದಿಗೆ, ಯೇಸು ದೇವರ ಸತ್ಯವನ್ನು, ಸಾಮರಸ್ಯದ ನಿಯಮವನ್ನು ಸರ್ವೋಚ್ಚ ಎಂದು ಸಾಬೀತುಪಡಿಸಿದರು..
ಯಾವುದೇ ಕರಾಳ/ಅಂಧಕಾರದ ಪರಿಸ್ಥಿತಿಯಲ್ಲಿ ಸಾಮರಸ್ಯವನ್ನು ತರಲು ಸತ್ಯದ ಬೆಳಕು ಇಲ್ಲಿದೆ..
ದೈವಿಕ ಪ್ರೀತಿಯ ಸಾಂತ್ವನ ಮತ್ತು ಮಾರ್ಗದರ್ಶನ, ಒಳಗೊಂಡಿರುವ ಪ್ರತಿಯೊಬ್ಬರನ್ನು ಸುತ್ತುವರಿಯುತ್ತದೆ..
ದೈವಿಕ ತತ್ತ್ವದ ನಿಯಮಗಳಿಗೆ ಮಣಿಯುವುದು ಭಯ ಮತ್ತು ಅಸಮಂಜಸವಾದ ಫಲಿತಾಂಶಗಳಿಂದ ರಕ್ಷಣೆ ನೀಡುತ್ತದೆ. ನಮ್ಮ ಭವಿಷ್ಯದ ಯೋಜನೆಗಳಿಗೆ ಏನು ಬೆದರಿಕೆಯೊಡ್ಡಿದರೂ, ನಾವು ಅಧೀನವಾಗಲು ನಿರಾಕರಿಸಬಹುದು. ಬದಲಾಗಿ, ಗುಣಪಡಿಸುವ ಫಲಿತಾಂಶಗಳಿಗೆ ನಮ್ಮನ್ನು ನಡೆಸುವಂತೆ ನಾವು ದೇವರ ವಿಶ್ವಾಸಾರ್ಹ ಮಾರ್ಗದರ್ಶನದ ಮೇಲೆ, ಆತನ ವಾಕ್ಯದ ಮೇಲೆ ಅವಲಂಬಿಸಿಕೊಳ್ಳಬಹುದು. ಇದನ್ನು ಮಾಡಲು ಯಾರು ಬೇಕಾದರೂ ಕಲಿಯಬಹುದು..
ದೇವರ ವಾಕ್ಯವನ್ನು ಉಸಿರಾಡಿ ಮತ್ತು ದೇವರ ಮಗುವಿನಂತೆ ಬೆಚ್ಚಗಿನ – ಸಾಂತ್ವನವನ್ನು ಅನುಭವಿಸಿ ಏಕೆಂದರೆ ಆತನ ಆಶೀರ್ವಾದಗಳು ಅಲ್ಲಿಂದಲೇ ಪ್ರಾರಂಭವಾಗುತ್ತವೆ..
ಮತ್ತು ಕ್ರಿಸ್ತನಲ್ಲಿರುವವರಿಗೆ, ಅವು ಎಂದಿಗೂ ಕೊನೆಗೊಳ್ಳುವುದಿಲ್ಲ..!
’’ಇದಲ್ಲದೆ ದೇವರ ಸಂಕಲ್ಪದ ಮೇರೆಗೆ ಕರೆಯಲ್ಪಟ್ಟು ಆತನನ್ನು ಪ್ರಿತಿಸುವವರ ಒಳ್ಳೇದಕ್ಕಾಗಿ ಎಲ್ಲವುಗಳು ಒಟ್ಟಾಗಿ ಸಂಭವಿಸುತ್ತವೆಯೆಂದು ನಾವು ಬಲ್ಲೆವು…….’’ (ರೋಮ 8:28)
April 30
But if from there you seek the Lord your God, you will find him if you look for him with all your heart and with all your soul. —Deuteronomy 4:29. When