ನಾವೆಲ್ಲರೂ ಪ್ರತಿದಿನವೂ ನಮ್ಮ ತಾಳ್ಮೆಯನ್ನು ಪರೀಕ್ಷಿಸುವಂಥ ಸಂದರ್ಭಗಳನ್ನು ಎದುರಿಸುತ್ತೇವೆ..
ನಮ್ಮ ಕೆಲವು ಅತಿದೊಡ್ಡ ಆಶೀರ್ವಾದಗಳು ತಾಳ್ಮೆಯಿಂದ ಬರುತ್ತವೆ ಮತ್ತು ನಮ್ಮ ಹೆಚ್ಚಿನ ಆಶೀರ್ವಾದಗಳು ಅಸಹನೆಯಿಂದ(ತಾಳ್ಮೆಗೆಡುವುದರಿಂದ) ಕಳೆದುಹೋಗುತ್ತವೆ..!
ತಾಳ್ಮೆಯಿಂದಿರುವುದು ದೇವರಲ್ಲಿ ಭರವಸೆ ಇರಿಸುವ ಒಂದು ಪ್ರಮುಖ ಭಾಗವಾಗಿದೆ, ಏಕೆಂದರೆ ನಮ್ಮ ಜೀವನ ಪರಿಸ್ಥಿತಿಗಳು ಯಾವಾಗಲೂ ನಾವು ಆದ್ಯತೆ ನೀಡುವಂತೆ ಇರುವುದಿಲ್ಲ..
ತಕ್ಷಣಕ್ಕೆ ನಾವು ಅದ್ಭುತವನ್ನು ನೋಡದಿದ್ದಾಗ ತಾಳ್ಮೆಯು ನಮ್ಮ ವಿಶ್ವಾಸವನ್ನು ಸ್ಥಿರವಾಗಿ ಮತ್ತು ಬಲವಾಗಿ ಇರಿಸಿಕೊಳ್ಳಲು ಸಹಾಯ ಮಾಡುವಂಥ ಗುಣವಾಗಿದೆ..
ಆದ್ದರಿಂದ, ಭರವಸೆ ಕಳೆದುಕೊಳ್ಳಬೇಡಿ – ದೇವರು ನಮಗೆ ತಾಳ್ಮೆಯನ್ನು ಕಲಿಸಲು ಪ್ರಯತ್ನಿಸುತ್ತಿಲ್ಲ, ತಾಳ್ಮೆಯು ಆತನ ಸ್ವಭಾವ ಎಂದು ನಾವು ಅರ್ಥಮಾಡಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ದೇವರು ನಮ್ಮೊಂದಿಗೆ ವ್ಯವಹರಿಸುವಾಗ ತಾಳ್ಮೆಯು ಒಂದು ಭಾಗವಾಗಿದೆ. ದೇವರು ನಮಗೆ ತಾಳ್ಮೆ ಮತ್ತು ದಯೆ ತೋರುತ್ತಾರೆ ಮತ್ತು ತಾಳ್ಮೆಯಿಂದಿರುವುದು ಆತನ ದೈವೀಕ ಸ್ವಭಾವದ ಭಾಗವಾಗಿದೆ..
ತಾಳ್ಮೆಯು ನಿಮಗೆ ಪರಿಶ್ರಮ ಮತ್ತು ಹೆಚ್ಚು ಉತ್ಪಾದಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ, ಇದು ಹೆಚ್ಚಿನ ಯಶಸ್ಸಿಗೆ ಕಾರಣವಾಗುತ್ತದೆ. ತಾಳ್ಮೆಯಿಂದಿರುವ ವ್ಯಕ್ತಿಗಳು ಹೆಚ್ಚಿನ ಕೃತಜ್ಞತೆ ಪ್ರಜ್ಞೆಯುಳ್ಳವರಾಗಿರುತ್ತಾರೆ..
ತಾಳ್ಮೆ ಎಂದರೆ ಶಾಂತವಾಗಿ, ಸೌಮ್ಯವಾಗಿ ಮತ್ತು ಎಂತಹ ಪರಿಸ್ಥಿತಿ ಬಂದರೂ ಅಚಲವಾಗಿ ವರ್ತಿಸುವುದು. ಅದು ಹೋಗುವ ಹಾದಿ ಒರಟಾಗಿದ್ದಲ್ಲಿ ಸಹಿಸಿಕೊಳ್ಳುವುದಾಗಿದೆ. ದೇವರು ಮತ್ತು ನಿಮ್ಮ ಸಹೋದರರೊಂದಿಗೆ ಬಲವಾದ ಮತ್ತು ಆರೋಗ್ಯಕರ ಸಂಬಂಧವನ್ನು ನಿರ್ಮಿಸುವ ನಿಮ್ಮ ಅಂತಿಮ ಗುರಿಯತ್ತ ಪ್ರಗತಿ ಸಾಧಿಸಲು ನೀವು ಪ್ರಯತ್ನಿಸುತ್ತಿರುವಾಗ ಅದು ದೃಢವಾಗಿ ಮತ್ತು ಸ್ಥಿರಚಿತ್ತವಾಗಿ ಉಳಿಯುವುದಾಗಿದೆ..
ದೀರ್ಘಶಾಂತನು ಶೂರನಿಗಿಂತಲೂ ಶ್ರೇಷ್ಠನು, ತನ್ನ ಮನಸ್ಸನ್ನು ಆಳುವವನು ಪಟ್ಟಣವನ್ನು ಗೆದ್ದವನಿಗಿಂತಲೂ ಉತ್ತಮನು.
ನಾವು ತಾಳ್ಮೆಯಿಲ್ಲದಿದ್ದರೆ, ಕರ್ತನ ಕೆಲವು ಅದ್ಭುತವಾದ ಕೊಡುಗೆಗಳನ್ನು ನಾವು ಕಳೆದುಕೊಳ್ಳುತ್ತೇವೆ.
’’ಕಾಣದಿರುವದನ್ನು ನಾವು ನಿರೀಕ್ಷಿಸುವದಾಗಿದ್ದರೆ ಅದಕ್ಕಾಗಿ ನಾವು ತಾಳ್ಮೆಯಿಂದ ಕಾದುಕೊಂಡಿರುತ್ತೇವೆ…… ‘’ (ರೋಮ 8:25)
May 12
There is now no condemnation for those who are in Christ Jesus, because through Christ Jesus the law of the Spirit of life in Christ has set me free from